ವರದಕ್ಷಿಣೆ ಕಿರುಕುಳ ಆರೋಪವಿದ್ದರೂ ದುನಿಯಾ ವಿಜಿ ಪತ್ನಿ ಬಂಧನವಿಲ್ಲವೇಕೆ?

ಮಂಗಳವಾರ, 13 ಡಿಸೆಂಬರ್ 2016 (10:18 IST)
ಬೆಂಗಳೂರು: ದುನಿಯಾ ವಿಜಿ ಮೊದಲ ಪತ್ನಿ ನಾಗರತ್ನ ಮತ್ತು ಪೋಷಕರು ತಮ್ಮನ ಹೆಂಡತಿಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆಂದು ಇತ್ತೀಚೆಗೆ ಒಟ್ಟು 11 ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಆದರೆ ಆರೋಪಕ್ಕೊಳಗಾದ ವಿಜಿ ಪತ್ನಿ ನಾಗರತ್ನಅವರನ್ನು ಇನ್ನೂ ಬಂಧಿಸಿಲ್ಲವೇಕೆ ಎಂಬುದು ಪ್ರಶ್ನೆಯಾಗಿದೆ.

ನಾಗರತ್ನ ಹಾಗೂ ಕುಟುಂಬದವರು 2 ವಾರಗಳ ಹಿಂದೆ ತಮ್ಮನ ಹೆಂಡತಿ ಮೀನಾಕ್ಷಿಗೆ  ವರದಕ್ಷಿಣೆ ನೆಪದಲ್ಲಿ ವಿಷಾಹಾರ ನೀಡಿದ್ದಲ್ಲದೆ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದರು ಎಂದು ದೂರು ದಾಖಲಾಗಿತ್ತು. ಸದ್ಯ ಆಸ್ಪತ್ರೆಯಲ್ಲಿರುವ ಮೀನಾಕ್ಷಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅವರ ಸ್ಥಿತಿ ಗತಿ ಬಗ್ಗೆ ವೈದ್ಯರೂ ಭರವಸೆ ನೀಡುತ್ತಿಲ್ಲ ಎಂದು ಮೀನಾಕ್ಷಿ ಕುಟುಂಬದವರು ಅಳಲು ತೋಡಿಕೊಂಡಿದ್ದಾರೆ.

ಪ್ರಕರಣ ಸಂಬಂಧ ನೆಲಮಂಗಲ ಠಾಣೆಯಲ್ಲಿ ನಾಗರತ್ನ ಸೇರಿದಂತೆ 11 ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಈ ಸಂಬಂಧ ನಾಗರತ್ನ ತಂದೆ, ತಾಯಿ ಮತ್ತು ತಮ್ಮ ನಾಗರಾಜ್ ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಆದರೆ ಪ್ರಕರಣದಲ್ಲಿ ಆರೋಪಿಳಗಾಗಿರುವ ನಾಗರತ್ನ ಮತ್ತು ಇತರ 8 ಮಂದಿಯ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲವೇಕೆ ಎಂದು ಕುಟುಂಬದವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ