ಯಶ್ ಮನೆಯವರಿಗೆಲ್ಲ ಜಗ್ಗೇಶ್ ಹಾಸ್ಯ ತುಂಬಾ ಇಷ್ಟವಂತೆ

ಸೋಮವಾರ, 15 ಡಿಸೆಂಬರ್ 2014 (09:27 IST)
ಈಗ ಯಶ್ ಕಾಲ ಎಂದೇ ಹೇಳ ಬಹುದಾಗಿದೆ. ಕನ್ನಡದ ಟಾಪ್ ಹೀರೊಗಲ್ಲಿ ಪುನೀತ್ ರಾಜ್ ಕುಮಾರ್, ದರ್ಶನ್ ಮತ್ತು ಸುದೀಪ್ ಅವರು ಇದ್ದಾರೆ. ಈಗ ಆ ಪಟ್ಟಿಗೆ ಯಶ್ ಹೆಸರು ಸಹಿತ ಸೇರ್ಪಡೆ ಆಗಿದೆ. ಯಶ್ ಈಗ ಗೆಲ್ಲುವ ಕುದುರೆ ಆಗಿದ್ದಾರೆ. ಇತ್ತೀಚಿಗೆ ಅವರು ವಾಸ್ತು ಪ್ರಕಾರ ಚಿತ್ರದ  ಆಡಿಯೋ ಸೀಡಿ ಬಿಡುಗಡೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ಯೋಗರಾಜ್ ಭಟ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಲ್ಲದೆ ಹಿರಿಯ ನಟ ಜಗ್ಗೇಶ್ ಅವರ ಬಗ್ಗೆ ತಮ್ಮ ಪ್ರೀತಿಯನ್ನು ಮಾತಿನ ಮೂಲಕ ತೋರಿದರು ಯಶ್. 
ವಾಸ್ತು ಪ್ರಕಾರ ವನ್ನು ಯೋಗರಾಜ್ ಭಟ್  ನಿರ್ದೇಶನ ಮಾಡಿದ್ದಾರೆ. ಡ್ರಾಮ ಚಿತ್ರದಲ್ಲಿ ಯೋಗರಾಜ್ ಭಟ್ ಅವರ ಗರಡಿಯಲ್ಲಿ ಯಶ್ ಹಾಗೂ ರಾಧಿಕ ಪಂಡಿತ್ ಈಗಾಗಲೇ ಕೆಲಸ ಮಾಡಿದ್ದಾರೆ. ಅದಾದ ಬಳಿಕ   ಪ್ರಾಯಶಃ ಮತ್ತೊಂದು ಚಿತ್ರದಲ್ಲಿ ನಟಿಸುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತಿದೆ ಎಂದೇ ಹೇಳಬಹುದಾಗಿದೆ. ಜಗ್ಗೇಶ್ ಅವರು ಹೇಳುತ್ತಿದ್ದ ಡಬ್ಬಲ್ ಮೀನಿಂಗ್ ಡೈಲಾಗ್ ಎಂದಿಗೂ ಮಿತಿಮೀರುತ್ತಿರಲಿಲ್ಲ. ಅದರಲ್ಲೂ ಮುಖ್ಯವಾಗಿ ಅವರ ಆ ರೀತಿಯ ಹಾಸ್ಯ ಅಶ್ಲೀಲತೆ ಇರುವುದಿಲ್ಲ. 
 
ನಮ್ಮ ಮನೆಯಲ್ಲಿ ಜಗ್ಗೇಶ್ ಹಾಸ್ಯ ಎಲ್ಲರಿಗೂ ಇಷ್ಟ.ಕನ್ನಡ ಸೂಪರ್ ಸ್ಟಾರ್ ಅಂದ್ರೆ ಜಗ್ಗೇಶ್ ಒಬ್ಬರೇ. ಅವರು ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ತಮ್ಮ ಸ್ವಂತ ಪ್ರತಿಭೆಯಿಂದ ಮೇಲೆ ಬಂದಿದ್ದಾರೆ ಎಂದು ತಿಳಿಸಿದ್ದಲ್ಲದೇ,  ಭಟ್ಟರು ಮತ್ತು ಜಗ್ಗೇಶ್ ಕಾಂಬಿನೇಶನ್ ಅದ್ಭುತ ಎಂದು ಹಾಡಿ ಹೊಗಳಿದ್ದಾರೆ ಈ ಸಂದರ್ಭದಲ್ಲಿ ಯಶ್. 

ವೆಬ್ದುನಿಯಾವನ್ನು ಓದಿ