ಅದಾದ ಬಳಿಕ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಉಪೇಂದ್ರ ಹೀಗೆ ಎಲ್ಲರು ಸಾಧ್ಯವಾದಷ್ಟು ತಮ್ಮ ಹಾಡಿ ಅವರ ಅಭಿಮಾನಿಗಳಿಗೆ ತಲುಪಿಸಿದ್ದಾರೆ. ಅದರಲ್ಲೂ ಉಪ್ಪಿ ಮತ್ತು ಪುನೀತ್ ಪಾಲು ಹೆಚ್ಚು. ಇತ್ತೀಚಿಗೆ ಚಿತ್ರ ಒಂದರಲ್ಲಿ ನೆನಪಿರಲಿ ಪ್ರೇಂ ಸಹ ಹಾಡಿದ್ದರು.
ಆದರೆ ಈಗ ಯಶ್ ಆ ಜಾಗ ತುಂಬುತ್ತಿದ್ದಾರೆ. ಅವರ ಅಭಿನಯದ ಹೊಸ ಚಿತ್ರ ಒಂದರಲ್ಲಿ ಯಶ್ ಹಾಡುತ್ತಿದ್ದಾರೆ.ಆರಂಭದಲ್ಲಿ ಈ ಹಾಡಿಗೆ ಸಂಗೀತ ನಿರ್ದೇಶಕರಾದ ವಿ ಹರಿ ಕೃಷ್ಣ ಮತ್ತು ವಿಜಯ್ ಪ್ರಕಾಶ್ ಅವರು ಧ್ವನಿ ನೀಡಿದ್ದರಂತೆ. ಆ ಬಳಿಕ ಯಶ್ ಸಹ ಹಾಡಿದರೆ ಚಂದ ಇರುತ್ತದೆ ಎಂದು ಇವರಿಗೆ ಅನ್ನಿಸಿದ ಕಾರಣ ಯಶ್ ಹಾಡಲು ವೇದಿಕೆ ಕಲ್ಪಿಸಿದ್ದಾರೆ ಸಂಗೀತ ನಿರ್ದೇಶಕರು. ಯಶ್ ಅಭಿಮಾನಿಗಳಿಗೆ ಅವರ ಆರಾಧ್ಯ ದೈವದ ಹಾಡು ಕೇಳುವ ಸದವಕಾಶ .