ಪಾರೂಲ್ ಯಾದವ್ ಪ್ರಾಣಾಪಾಯಕ್ಕೆ ಸಿಲುಕಿದ ಸನ್ನಿವೇಶ?!

ಮಂಗಳವಾರ, 31 ಮಾರ್ಚ್ 2015 (10:10 IST)
ಸಾಮಾನ್ಯವಾಗಿ ಚಿತ್ರದ ಶೂಟಿಂಗ್ ನಲ್ಲಿ ಅನೇಕ ಬಗೆಯ ಅವಘಡಗಳು ನಡೆಯುತ್ತಲೇ ಇರುತ್ತವೆ. ಅದರ ಅರಿವು ಬಹುತೇಕ ಬಾರಿ ವೀಕ್ಷಕರಿಗೆ ಗೊತ್ತೇ ಆಗುವುದಿಲ್ಲ. ಅದೇ ರೀತಿ ವಾಸ್ತು ಪ್ರಕಾರ ಚಿತ್ರದ ಶೂಟಿಂಗ್ ಸಮಯದಲ್ಲಿ ನಟಿ ಪಾರೂಲ್ ಯಾದವ್ ಗೂ ಸಹಿತ ಆಗಿದೆ. ವಿಷಯಕ್ಕೆ ಬರುವುದಾದರೆ ಈ ಮಾದಕ ಚೆಲುವೆ ಯೋಗರಾಜ್ ಭಟ್ ಅವರ ನಿರ್ದೇಶನದ ವಾಸ್ತುಪ್ರಕಾರ ಚಿತ್ರದಲ್ಲಿ ನಟಿಸಿದ್ದಾಳೆ. ಜಗ್ಗೇಶ್ ಜೋಡಿಯಾಗಿ ಪಾರೂಲ್ ನಟಿಸಿದ್ದಾಳೆ. 
ಸನ್ನಿವೇಶ ಒಂದರಲ್ಲಿ ಜಗ್ಗೇಶ್ ಮತ್ತು ಪಾರೂಲ್ ನಡುವೆ ಹೊಡೆದಾಟ ತಿಕ್ಕಾಟ ನಡೆಯುತ್ತದೆ. ಆ ದೃಶ್ಯದಲ್ಲಿ ಆಕೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಾಯಿಗೆ ಬಟ್ಟೆ ಕಟ್ಟುವ ಸನ್ನಿವೇಶವಿದ್ದು  ನಿರ್ದೇಶಕ ಯೋಗರಾಜ್ ಭಟ್ ಅವರು ಸನ್ನಿವೇಶ ನೈಜವಾಗಿರಲಿ ಎಂದು ಆಕೆಯ ಬಾಯಿಗೆ ಬಟ್ಟೆ ಕಟ್ಟಿ ನಟಿಸುವಂತೆ ಹೇಳಿದ್ದರಂತೆ. ಆದರೆ ಆ ರೀತಿ ಬಾಯಿಗೆ ಕಟ್ಟುವ ರಭಸದಲ್ಲಿ ಆಕೆಯ ಕತ್ತಿಗೆ  ಬಿಗಿದಿದ್ದರಂತೆ ಜಗ್ಗೇಶ್ ಬಟ್ಟೆಯಿಂದ. ಆ ಸಮಯದಲ್ಲಿ ಪಾರೂಲ್‌ಗೆ ಉಸಿರು ಗಟ್ಟೋಕೆ ಆರಂಭ ವಾಯ್ತು. ಆಕೆ ಉಸಿರಾಡಲು ತೊಂದರೆ ಪಡುತ್ತಿರುವುದನ್ನು ಕಂಡು ಎಲ್ಲರಿಗೂ ಅದು ನಟನೆ ಎನ್ನಿಸಿತ್ತಂತೆ. ಆಕೆಯ ಮುಖ ನೀಲಿಗಟ್ಟೋಕೆ ಆರಂಭವಾಯ್ತಂತೆ. ಅದನ್ನು ಛಾಯಾಗ್ರಾಹಕ ಸಹಿತ ಗುರುತಿಸಲಿಲ್ಲವಂತೆ. ಆ ಸನ್ನಿವೇಶ ನೆನೆದರೆ ಈಗಲೂ ಪಾರೂಲ್‌ಗೆ ಭಯ ಆಗುತ್ತಂತೆ.

ವೆಬ್ದುನಿಯಾವನ್ನು ಓದಿ