ಇಲ್ಲಿದ್ದಾರೆ ಕನ್ನಡದ ಹೊಸ ಕಿಲಾಡಿ ತಾತಾ ಜೊತೆಗೆ ಗ್ಲಾಮರ್ ಬೊಂಬೆ ನೇಹಾ!

ಗುರುವಾರ, 5 ಡಿಸೆಂಬರ್ 2013 (10:41 IST)
PR
ದುಡ್ಡೇ ದೊಡ್ಡಪ್ಪ ಅನ್ನುವುದು ವಾಡಿಕೆ ಮಾತು. ಸಿನಿಮಾದವರು ದುಡ್ಡು ಸುರಿದು ದುಡ್ಡು ಹೆಸರಿನ ಅನೇಕ ಚಿತ್ರಗಳನ್ನು ನಿರ್ಮಿಸಿದ್ದಾರೆ. ಈಗ ಆ ಪರಂಪರೆಗೆ ದುಡ್ಡು ಮತ್ತು ಸಂಬಂಧ ಸೇರಿದೆ. ಚಿತ್ರ ಹೊಸಬರ ತಂಡದಲ್ಲಿ ನಿರ್ಮಾಣ ವಾಗುತ್ತಿದೆ. ಇದರಲ್ಲಿ ಹಿರಿಯ ಕಲಾವಿದ ಸುದರ್ಶನ್ ಮಾತ್ರ ತುಂಬಾ ಹಳೆ ನಟ. ಇವರು ಈ ಚಿತ್ರದಲ್ಲಿ ಕಾಮಿಡಿ ಕಿಲಾಡಿ ತಾತ ನಾಗಿ ಜನರ ಮುಂದೆ ಬರುತ್ತಿದ್ದಾರೆ. ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲ ಹಿಂದಿಯಲ್ಲೂ ತಮ್ಮ ಖಳ ಅಭಿನಯ ತೋರಿದ್ದ ಸತ್ಯಜಿತ್ ಅವರ ಪುತ್ರ ಅಕ್ಷಯ್ ಈ ಚಿತ್ರ ಮೂಲಕ ಸಿನಿ ಜೀವನದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುತ್ತಿದ್ದಾರೆ. ಮೈಸೂರ್ ಕುಮಾರ್ ಇದರ ನಿರ್ಮಾಪಕರು.

ಮಹದೇಶ್ವರ ಬೆಟ್ಟ ಮತ್ತು ಬನ್ನೇರು ಘಟ್ಟದಲ್ಲಿ ಚಿತ್ರೀಕರಣ ಮಾಡಿರುವ ಈ ಚಿತ್ರವನ್ನು ರಂಗಾಯಣ ಪ್ರತಿಭೆ ಮೈಸೂರ್ ಮಂಜು ನಿರ್ದೇಶಿಸುತ್ತಿದ್ದಾರೆ. ಸಂಗೀತ ಗಣೇಶ್ ಭಟ್ ಅವರದ್ದು. ಈ ಚಿತ್ರವನ್ನು ಫೆಬ್ರವರಿ 14ಕ್ಕಕ್ಕೆ ಬಿಡುಗಡೆ ಮಾಡುವ ಇರಾದೆ ಇದೆ ನಿರ್ದೇಶಕರಿಗೆ.ಸದ್ಯದಲ್ಲಿ ಇದರ ಹಾಡುಗಳ ಬಿಡುಗಡೆಯ ಕಾರ್ಯಕ್ರವಿದೆ. ಅದಕ್ಕಾಗಿ ಟೈಮ್ ಮತ್ತು ಸ್ಥಳ ಸೆಟ್ ಮಾಡುವತ್ತಲೂ ನಿರ್ದೇಶಕರು ಬ್ಯುಸಿ ಆಗಿದ್ದಾರೆ. ಇದು ಕೌಟುಂಬಿಕ ಕಥಾ ಹಂದರ ಇರುವ ಚಿತ್ರ. ಕುಟುಂಬಗಳು-ದ್ವೇಷಗಳು ಮತ್ತು ಗಲಾಟೆಗಳು ಸಹ ಹೆಚ್ಚಿನ ಪ್ರಾಮುಖ್ಯತೆ ಗಳಿಸಿಕೊಳ್ಳುತ್ತಿದೆ. ನೇಹಾ ಪಾಟೀಲ್ ಚಿತ್ರದ ಹೀರೋಯಿನ್. ಕನ್ನಡದಲ್ಲಿ ತಮ್ಮ ರೂಪಸಿರಿಯನ್ನು ಬಿಚ್ಚಿ ತೋರುವ ನಟಿಯರಲ್ಲಿ ಈಕೆಯ ಹೆಸರೂ ಇದೆ. ಜೊತೆಗೆ ನಟನೆ ಸಹ ಗೊತ್ತಿದೆ ಆ ಮಟ್ಟಿಗೆ ಪ್ರೇಕ್ಷಕರು ಸೇಫು!ನೇಹಾಳ ಟಾಕಿ ಭಾಗ ಇನ್ನೂ ಪೂರ್ಣವಾಗಿಲ್ಲ. ಚಿತ್ರದಲ್ಲಿ ನಾಗೇಂದ್ರ ಅರಸ್ ಸಂಕಲನ ಮತ್ತು ಖಳನಟನ ಪಾತ್ರ ಎರಡೂ ಜವಾಬ್ದಾರಿಯನ್ನು ಸಹ ತಮ್ಮದಾಗಿಸಿಕೊಂಡು ಯಶಸ್ವಿ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ