ನಾಳೆ ಸ್ಯಾಂಡಲ್ ವುಡ್ ನಲ್ಲಿ ಬದ್ಮಾಶ್ ಚಿತ್ರ ಬಿಡುಗಡೆ

ಗುರುವಾರ, 17 ನವೆಂಬರ್ 2016 (14:03 IST)
ಬೆಂಗಳೂರು: ಇಂದು ಮತ್ತು ನಾಳೆ ಕನ್ನಡ ಚಿತ್ರರಸಿಕರಿಗೆ ಹಬ್ಬ. ಶರಣ್ ಅಭಿನಯದ ನಟರಾಜ ಸರ್ವಿಸ್ ಇಂದು ಬಿಡುಗಡೆಯಾದರೆ, ನಾಳೆ ಧನಂಜಯ್ ಅಭಿನಯದ ಬದ್ಮಾಶ್ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಆಕಾಶ್ ಶ್ರೀವತ್ಸ ಚಿತ್ರದ ನಿರ್ದೇಶಕರು. ರವಿ ಕಶ್ಯಪ್  ನಿರ್ಮಾಪಕರು. ಹೆಸರೇ ಹೇಳುವಂತೆ ಇದೊಂದು ಸಾಹಸಮಯ ಸಿನಿಮಾ. ರಾಟೆ ಚಿತ್ರದ ಖ್ಯಾತಿಯ ಧನಂಜಯ್ ಹೀರೋ.  ಹೊಸಬರ ಚಿತ್ರ ಎನ್ನುವುದು ಇನ್ನೊಂದು ವಿಶೇಷ.

ಈಗಾಗಲೇ ಇದರ ಹಾಡುಗಳು ಜನರಿಗೆ ಇಷ್ಟವಾಗಿದೆ. ಧನಂಜಯ್ ಅವರ ಡೈಲಾಗ್ ಒಂದು ಜನಪ್ರಿಯವಾಗಿದೆ. ಚಿತ್ರಕ್ಕೆ ಸಾಕಷ್ಟು ಪ್ರಚಾರವೂ ಸಿಕ್ಕಿದೆ. ಹೀಗಾಗಿ ಸಾಕಷ್ಟು ಕುತೂಹಲ ಮೂಡಿಸಿದೆ. ಆದರೆ ನೋಟು ಬದಲಾವಣೆ ವಿಚಾರ ಹಾಗೂ ಇಂದು ಬಿಡುಗಡೆಯಾದ ಶರಣ್ ನಟರಾಜ ಸರ್ವಿಸ್ ನ ನಡುವೆ ಬದ್ಮಾಶ್ ಎಷ್ಟು ಸದ್ದು ಮಾಡುತ್ತಾನೆಂದು ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ