ಬೆಂಗಳೂರು: ಮಠ ಸಿನಿಮಾ ಖ್ಯಾತಿಯ ಡೈರಕ್ಟರ್ ಗುರುಪ್ರಸಾದ್ ಹೊಸದೊಂದು ಚಿತ್ರ ಮಾಡಿದ್ದಾರೆ. ಇದಕ್ಕೆ ಎರಡನೇ ಸಲ..! ಎಂದು ಹೆಸರು. ಸದ್ಯದಲ್ಲೇ ತೆರೆಗೆ ಬರುವ ನಿರೀಕ್ಷೆಯಿದೆ.
ಜೀ ಕನ್ನಡದಲ್ಲಿ ಡ್ಯಾನ್ಸ್ ರಿಯಾಲಿಟಿ ಶೋ ಮಾಡಿದ ಮೇಲೆ ಗುರುಪ್ರಸಾದ್ ಎಲ್ಲಿ ಹೋದರು ಎಂದು ಅಂದುಕೊಳ್ಳುತ್ತಿರುವವರಿಗೆ ಹೊಸ ಚಿತ್ರದೊಂದಿಗೆ ಅವರು ಎಂಟ್ರಿ ಕೊಡುತ್ತಿದ್ದಾರೆ. ಮೈಸೂರಿನ ಯೋಗೇಶ್ ನಾರಾಯಣ್ ಚಿತ್ರದ ನಿರ್ಮಾಪಕರು. ಇವರು ಈ ಹಿಂದೆ ಯಶ್ ನಾಯಕರಾಗಿ ಮೊದಲಾ ಸಲಾ ಚಿತ್ರ ಮಾಡಿದ್ದರು.
ಈ ಸಿನಿಮಾಕ್ಕೆ ಕಥೆ, ಚಿತ್ರಕತೆ, ಸಾಹಿತ್ಯ, ನಿರ್ದೇಶನ ಎಲ್ಲಾ ಜವಾಬ್ದಾರಿಯೂ ಗುರುಪ್ರಸಾದ್ ಅವರದ್ದೇ ಆಗಿದೆ. ಇದರ ಅಡಿಬರಹವೇ ಸೂಚಿಸುವಂತೆ ಪಕ್ಕಾ ಲವ್ ಸ್ಟೋರಿ ಎನ್ನುವುದು ಖಾತ್ರಿ. ಬದ್ಮಾಶ್ ಹೀರೋ ಧನಂಜಯ್ ಎರಡನೇ ಸಲಾ ಪ್ರೇಮ ಕತೆಯ ಹೀರೋ. ಅನೂಪ್ ಸೀಳಿನ್ ಸಂಗೀತವೂ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ