ಬ್ಯಾಂಕ್`ನಲ್ಲಿ ಹಣ ಸಾಗಿಸುವವರೇ 7.5 ಕೋಟಿ ಹಣದೊಂದಿಗೆ ಪರಾರಿಯಾದರು..!

ಶುಕ್ರವಾರ, 12 ಮೇ 2017 (20:54 IST)
ಮಂಗಳೂರಿನ ಯೆಯ್ಯಾಡಿಯಿಂದ ಬೆಂಗಳೂರಿನ ಕೋರಮಂಗಲ ಆಕ್ಸಿಸ್ ಬ್ಯಾಂಕ್ ತಲುಪಿಸಬೇಕಿದ್ದ 7.5 ಕೋಟಿ ರೂ. ಹಣವಿದ್ದ ವಾಹನದ ಜೊತೆ ಸಿಬ್ಬಂದಿ ಪರಾರಿಯಾಗಿರುವ ಘಟನೆ ವರದಿಯಾಗಿದೆ. ಸಂಜೆ ಹುಣಸೂರು ಬಳಿ ವಾಹನ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

ಎಸ್ಐಎಸ್ ಪ್ರೊಸೆಗುರ್ ಹೋಲ್ಡಿಂಗ್ ಕಂಪನಿಯ ಚಾಲಕ ಕರಿಬಸವ, ಕಸ್ಟೋಡಿಯನ್ ಪರಶುರಾಮ್, ಗನ್ ಮ್ಯಾನ್`ಗಳಾದ ಪೂವಯ್ಯ, ಬಸಪ್ಪ ಪರಾರಿಯಾದವರು.

ಮೇ 11ರಂದು ಬೊಲೆರೋ ವಾಹನದಲ್ಲಿ ಹಣ ತುಂಬಿ ಬೆಂಗಳೂರಿನ ಆಕ್ಸಿಸ್ ಬ್ಯಾಂಕ್`ಗೆ ಕಳುಹಿಸಲಾಗಿತ್ತು. ಸಂಜೆಯಾದರೂ ಹಣ ಕೋರಮಂಗಲದ ಬ್ಯಾಂಕ್`ಗೆ ತಲುಪದಿದ್ದಾಗ ಕಂಪನಿ ಮುಖ್ಯಸ್ಥರು ಪೊಲೀಸರಿಗೆದೂರು ನೀಡಿದ್ದಾರೆ. ಪ್ರಕರಣ ಭೇದಿಸಲು ವಿಶೇಷ ತಂಡಿಸಲಾಗಿದೆ. ಪೊಲೀಸರ ಕಣ್ತಪ್ಪಿಸಲು ಆರೋಪಿಗಳು ಮಾರ್ಗ ಬದಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ