ರಂಗೇರಿದ ವರುಣಾ ಪಾಲಿಟಿಕ್ಸ್

ಗುರುವಾರ, 4 ಮೇ 2023 (17:40 IST)
ವರುಣಾ ರಾಜಕೀಯದಲ್ಲಿ, ಜಿದ್ದಾಜಿದ್ದಿನ ರಾಜಕೀಯ ಹೋರಾಟ ಜೋರಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ವಿ.ಸೋಮಣ್ಣ ಸ್ಪರ್ಧೆಯಿಂದ ಅಖಾಡ ಸಿಕ್ಕಾಪಟ್ಟೆ ರಂಗೇರಿದೆ. ಚುನಾವಣೆಯಲ್ಲಿ ಬಿಜೆಪಿ ಬಗ್ಗು ಬಡಿಯಲು ಪಣ ತೊಟ್ಟಿರುವ ಕಾಂಗ್ರೆಸ್, ಬಿರುಸಿನ ಪ್ರಚಾರ ನಡೆಸ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಪರ ಸ್ಯಾಂಡಲ್​​​​​ವುಡ್ ಸ್ಟಾರ್ಸ್ ಫೀಲ್ಡಿಗಿಳಿದ್ದಾರೆ. ಮೈಸೂರಿನ ಪ್ರತಿಷ್ಠಿತ ಕ್ಷೇತ್ರದಲ್ಲಿ ಒಂದಾದ ವರುಣಾದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್,ನಟಿ ನಿಶ್ವಿಕಾ ನಾಯ್ಡು ಪ್ರಚಾರ ನಡೆಸುತ್ತಿದ್ದಾರೆ. ಮೋಹಕ ತಾರೆ ರಮ್ಯಾ, ಕಾಮಿಡಿ ಕಿಂಗ್ ಸಾಧು ಕೋಕಿಲಾ, ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಪ್ರಚಾರಕ್ಕೆ ಇಳಿಯೋದು ಕನ್ಫರ್ಮ್ ಆಗಿದೆ. ಗುರುವಾರ ಹಾಗೂ ಶುಕ್ರವಾರ ಸ್ಯಾಂಡಲ್​ವುಡ್ ತಾರೆಯರು ಪ್ರಚಾರಕ್ಕೆ ಬರುತ್ತಿದ್ದಾರೆ. ವರುಣಾದಲ್ಲಿ ದಿನದಿಂದ ದಿನಕ್ಕೆ ರಾಜಕೀಯ ಹೋರಾಟ ಜೋರಾಗ್ತಿದ್ದು, ಕದನ ಕಣ ಸಾಕಷ್ಟು ಸದ್ದು ಮಾಡ್ತಿದೆ. ಆರಂಭದಲ್ಲಿ ವರುಣಾಕ್ಕೆ ಹೆಚ್ಚು ಪ್ರಚಾರಕ್ಕೆ ಬರುವುದಿಲ್ಲ ಅಂತ ಸಿದ್ದರಾಮುಯ್ಯ ಹೇಳಿದ್ರು. ದಿನದಿಂದ ದಿನಕ್ಕೆ ಸೋಮಣ್ಣ ಹೆಚ್ಚು ಪ್ರಚಾರ ಮಾಡ್ತಿದ್ದು, ಸಿದ್ದುಗೆ ಸ್ಪರ್ಧೆ ಸಾಕಷ್ಟು ಟೈಟ್ ಆಗಿದೆ. ಎಲ್ಲಾ ಹಳ್ಳಿಗಳಲ್ಲಿ ಲಿಂಗಾಯತರು ಬಿಜೆಪಿ ಪರ ಒಲವು ತೋರಿದ್ದು , ಸಿದ್ದುಗೆ ಟಕ್ಕರ್ ಕೊಡಲು ಸಾಕಷ್ಟು ರಣವ್ಯೂಹಗಳನ್ನ ಹೆಣೆಯಲಾಗುತ್ತಿದೆ. ಹೀಗಾಗಿಯೇ ಸಿದ್ದು ಮತ ಸೆಳೆಯಲು ಸ್ಟಾರ್ಸ್ ಮೊರೆ ಹೋಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ