ಬಿಜೆಪಿ ಪಾಳಯದಲ್ಲಿ 2 FIR ದಾಖಲು

ಶುಕ್ರವಾರ, 14 ಏಪ್ರಿಲ್ 2023 (19:54 IST)
ಬಿಜೆಪಿ ಪಟ್ಟಿ ಬಿಡುಗಡೆ ನಂತರ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಅಸಮಾಧಾನದ ಹೊಗೆ ಭುಗಿಲೆದ್ದಿದೆ.. ತಮ್ಮೇಶ್ ​ಗೌಡಗೆ ಟಿಕೆಟ್​ ಒಲಿದುಬಂದಿದ್ದು, ಎ. ರವಿ ಹಾಗೂ ಮುನೀಂದ್ರ ಕುಮಾರ್​ಗೆ ಟಿಕೆಟ್ ಕೈತಪ್ಪಿ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.. ಇನ್ನು ಬ್ಯಾಟರಾಯನಪುರದ ಬಿಜೆಪಿ ಪಾಳಯದಲ್ಲಿ 2 ಪ್ರತ್ಯೇಕ FIR ದಾಖಲಾಗಿದೆ.. ಎ ರವಿ ಹಾಗೂ ಮುನೀಂದ್ರ ಕುಮಾರ್ ಬೆಂಬಲಿಗರ ಪ್ರತಿಭಟನೆ ಬಗ್ಗೆ ಕೊಡಿಗೇಹಳ್ಳಿ ಠಾಣೆಯಲ್ಲಿ FIR ದಾಖಲಾಗಿದೆ.. ಇತ್ತ ತಮ್ಮೇಶ್​ ಗೌಡ ಪರ ಕಾರ್ಯಕರ್ತರಿಂದ ಮಹಿಳಾ ಕಾರ್ಯದರ್ಶಿಗೆ ಬೆದರಿಕೆ ಹಾಕಿದ್ದಾರೆ.. ಕಾಂತಲಕ್ಷ್ಮಿ ಎಂಬುವರಿಗೆ ತಮ್ಮೇಶ್​ಗೌಡ ಪರ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ.. ಮರ್ಯಾದೆ ಕಳೆದು ಸಾರ್ವಜನಿಕವಾಗಿ ಓಡಾಡದೆ ಮಾಡುತ್ತೇವೆಂದು ಧಮ್ಕಿ ಹಾಕಿದ್ದಾರೆ.. ಈ ಸಂಬಂಧ ಅಮೃತಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ