ಗುಂಡ್ಲುಪೇಟೆಯಲ್ಲಿ ಸರ್ಕಾರಿ ಕಾರಿನಲ್ಲಿದ್ದ 20 ಲಕ್ಷ ರೂ. ಪತ್ತೆ

ಶುಕ್ರವಾರ, 7 ಏಪ್ರಿಲ್ 2017 (13:14 IST)
ಉಪಚುನಾವಣಾ ಕಣದಲ್ಲಿ ಝಣ ಝಣ ಕಾಂಚಾಣದ ಹವಾ ಶುರುವಾಗಿದೆ. ಗುಂಡ್ಲುಪೇಟೆಯ ಖಾಸಗಿ ಹೋಟೆಲ್ ಬಳಿ ನಿಂತಿದ್ದ ಕಾರಿನಲ್ಲಿ ಸುಮಾರು 20 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ ಎಂದು ವರದಿಯಾಗಿದೆ. ಕಾರಿನ ಮೇಲೆ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ನಿರ್ದೇಶಕರ ಬೋರ್ಡ್ ಇದೆ ಎನ್ನಲಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿದೆ. 
 

ಬಿಜೆಪಿ ಯುವ ಮೋರ್ಚಾ ದಾಳಿ ನಡೆಸಿ ಹಣ ಪತ್ತೆ ಮಾಡಿದ್ದಾರೆ. ಕಾರನ್ನ ಪೊಲೀಸರು ಪರಿಶಿಲನೆ ನಡೆಸಿ ಏನೂ ಇಲ್ಲವೆಂದು ಹೇಳಿದರು. ಆದರೆ, ನಾವು ಪರಿಶೀಲನೆ ನಡೆಸಿದಾಗ ಸಿಟ್ ಕೆಳಗೆ 2000 ರು. ನೋಟಿನ 9 ಕಂತೆಗಳು ಪತ್ತೆಯಾಗಿವೆ ಎಂದು ಯುವ ಮೋರ್ಚಾ ಕಾರ್ಯಕರ್ತರು ಖಾಸಗಿ ಚಾನಲ್`ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಾರಿನಲ್ಲಿದ್ದ 4 ಮಂದಿ ದಾಳಿ ನಡೆದ ಕೂಡಲೆ ನಾಪತ್ತೆಯಾಗಿದ್ದಾರೆ. ಕಾರನ್ನ ವಶಪಡಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ