ನಾಡಹಬ್ಬಕ್ಕೆ ಸಕಲ ಸಿದ್ಧತೆ

ಶನಿವಾರ, 3 ಸೆಪ್ಟಂಬರ್ 2022 (19:49 IST)
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕಾಗಿ ಮೈಸೂರಿನಲ್ಲಿ ಸಿದ್ಧತಾ ಕಾರ್ಯ ಚುರುಕುಗೊಂಡಿದೆ.ಅದ್ದೂರಿಯಾಗಿ ದಸರಾ ಪ್ರಾಯೋಜಕತ್ವಕ್ಕಾಗಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹಾಗೂ ಎಸ್ಪಿ ಆರ್. ಚೇತನ್ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ದಸರಾದ 18 ಕ್ಕೂ ಹೆಚ್ಚು ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವಕ್ಕೆ ಕರೆ ನೀಡಿದರು.
 
ರಾಜ್ಯದ ಕೈಗಾರಿಕೋದ್ಯಮಿಗಳು, ಉದ್ಯಮಿಗಳು, ಬ್ಯಾಂಕರ್‌ಗಳು, ಹಾಗೂ ಡೆವಲಪರ್‌ಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಕನಿಷ್ಠ 2 ಲಕ್ಷದಿಂದ ತಮ್ಮ ಶಕ್ತಿ ಅನುಸಾರ ಪ್ರಾಯೋಜಕತ್ವವನ್ನು ಪಡೆಯಲು ಅವಕಾಶ ನೀಡಲಾಗಿದೆ.ಸೆ.10 ರೊಳಗೆ ಪ್ರಯೋಜನಕಾರಿತ್ವಕ್ಕೆ ನೊಂದಣಿ ಮಾಡಿಕೊಳ್ಳಲು ಸೂಚನೆ.
 
ಪ್ರಾಯೋಜಕತ್ವ ಪಡೆಯುವವರು ದಸರಾ ವಿಶೇಷಾಧಿಕಾರಿ ಡಿಸಿ ಬಗಾದಿ ಗೌತಮ್ ಅವರ ಹೆಸರಿಗೆ ಡಿಡಿ ಅಥವಾ ಚೆಕ್ ನೀಡಿ ಸೂಚನೆ ನೀಡುವ ಸಮಾರಂಭದಲ್ಲಿ ಪ್ರಾಯೋಜಕತ್ವ ಕುರಿತು ಪರಸ್ಪರ ಚರ್ಚೆ ಕೂಡ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ