ಅಂಬರೀಶ್‌ಗೆ ಸಚಿವ ಸ್ಥಾನದಿಂದ ಕೊಕ್: ನಾಳೆ ಚಿತ್ರೋದ್ಯಮ ಬಂದ್

ಭಾನುವಾರ, 19 ಜೂನ್ 2016 (12:51 IST)
ವಸತಿ ಖಾತೆ ಸಚಿವ ಅಂಬರೀಶ್ ಅವರಿಗೆ ಸಚಿವ ಸ್ಥಾನದಿಂದ ಕೈಬಿಟ್ಟಿರುವುದನ್ನು ವಿರೋಧಿಸಿ ನಾಳೆ ಚಿತ್ರೋದ್ಯಮ ಬಂದ್ ಮಾಡಲು ಚಿತ್ರೋದ್ಯಮ ವಾಣಿಜ್ಯ ಮಂಡಳಿ ನಿರ್ಧರಿಸಿದೆ.
 
ಸಚಿವ ಅಂಬರೀಶ್ ಅವರ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲ. ಯಾವುದೇ ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿಲ್ಲವಾದರೂ ಅವರನ್ನು ಅನಗತ್ಯವಾಗಿ ಸಚಿವ ಸ್ಥಾನದಿಂದ ಹೊರಹಾಕಲಾಗಿದೆ ಎಂದು ಚಚನಚಿತ್ರ ನಟರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ನಟ ಯಶ್ ಮಾತನಾಡಿ ಅಂಬರೀಶ್ ಯಾವತ್ತೂ ತಮ್ಮ ಜೀವನದಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದ ಕೊಟ್ಟವರಲ್ಲ. ಮಂಡ್ಯ ಜಿಲ್ಲೆಯ ಜನತೆಯ ಜೊತೆಗೆ ರಾಜ್ಯದ ಜನತೆಗೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಆದಾಗ್ಯೂ , ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
 
ಅಂಬರೀಶ್ ಬೆಂಬಲಿಗ ಆಪ್ತ ಲಿಂಗರಾಜು ಮಾತನಾಡಿ, ಸಚಿವ ಅಂಬರೀಶ್ ಮರಳುಗಣಿಗಾರಿಕೆ ಮಾಡಿದ್ದಾರಾ ?  ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರಾ? ಯಾವ ಕಾರಣಕ್ಕೆ ಸಚಿವ ಸ್ಥಾನದಿಂದ ಕೈಬಿಡಲಾಗಿದೆ ಎನ್ನುವುದನ್ನು ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ