ಮೈಸೂರಿನಲ್ಲಿ ಅಮಿತ್ ಶಾ ಸಿಎಂ ಸಿದ್ದರಾಮಯ್ಯಗೆ ಹಾಕಿದ ಸವಾಲೇನು…? ಭಯದಿಂದ ಕಾಂಗ್ರೆಸ್ ಏನು ಮಾಡ್ತಿದೆಯಂತೆ ಗೊತ್ತಾ…?

ಗುರುವಾರ, 25 ಜನವರಿ 2018 (15:40 IST)
ಮೈಸೂರು : ಬಿ.ಎಸ್ ಯಡಿಯೂರಪ್ಪ ಅವರು ಭಾವಿ ಸಿಎಂ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಗುರುವಾರ (ಇಂದು )ಹೇಳಿದ್ದಾರೆ.


ಸಮಾವೇಶ ಸಮಾರಂಭದಲ್ಲಿ ಮಾತನಾಡಿದ ಅವರು ‘ ಪರಿವರ್ತನಾ ಯಾತ್ರೆ ಕಾಂಗ್ರೆಸ್ ನವರಲ್ಲಿ ಭಯ ಸೃಷ್ಟಿಸಿದೆ. ಹೀಗಾಗಿ ರಾಲಿ ತಡೆಯುವುದು, ಬಂದ್ ಮಾಡಿಸುವುದು, ಮುಂತಾದ ಅನ್ಯ ಮಾರ್ಗಗಳ ಮೂಲಕ ತೊಂದರೆ ಕೊಡ್ತಿದ್ದಾರೆ. ನಾನು ಇಂದು ಇಲ್ಲಿಗೆ ಸಿಎಂಗೆ ಸವಾಲು ಹಾಕಲು ಬಂದಿದ್ದೇನೆ. ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಅಸ್ತಿತ್ವಕ್ಕೆ ಬರಲಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಫೆ. 4  ರಂದು ಪ್ರಧಾನಿ ಮೋದಿ ರಾಲಿ ತಡೆಯಲು ಪ್ರಯತ್ನ ನಡೆದಿದೆ. ಅಂದು ಅಪಾರ ಸಂಖ್ಯೆಯಲ್ಲಿ ಜನ ಸೇರುವ ವಿಶ್ವಾಸ ನನಗಿದೆ. ಈ ಮೂಲಕ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತೋರಿಸಲಿದೆ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ