ಕರ್ನಾಟಕಕ್ಕೆ ಬಂದರೂ ನಿಷ್ಠೆ ತಪ್ಪದ ಅಮಿತ್ ಶಾ

ಭಾನುವಾರ, 1 ಏಪ್ರಿಲ್ 2018 (05:45 IST)
ಮೈಸೂರು: ಮೈಸೂರಿನಲ್ಲಿ ಎರಡು ದಿನಗಳ ಕಾಲ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವಾಗಲೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮ ಎಂದಿನ ಕಾರ್ಯಕ್ರಮವೊಂದನ್ನು ಮರೆಯದೇ ಪಾಲಿಸಿದ್ದಾರೆ. ಅದೇನದು?

ಶಾ ತಮ್ಮ ತವರಿನಲ್ಲಿದ್ದಾಗಲೂ ಪ್ರತೀ ಶನಿವಾರ ತಪ್ಪದೇ ಆಂಜನೇಯ ಸ್ವಾಮಿಯ ದರ್ಶನ ಮಾಡಿಯೇ ಮುಂದಿನ ಕೆಲಸಗಳನ್ನು ಮಾಡುತ್ತಾರೆ. ಇದೀಗ ಕರ್ನಾಟಕಕ್ಕೆ ಚುನಾವಣೆ ಪ್ರಚಾರಕ್ಕೆ ಬಂದಾಗಲೂ ಅದನ್ನು ತಪ್ಪಿಸಲಿಲ್ಲ.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಬಂದ ಶಾ, ವಿಶೇಷ ಪೂಜೆ ಸಲ್ಲಿಸಿಯೇ ನಿನ್ನೆ ಚುನಾವಣಾ ಕೆಲಸಗಳಲ್ಲಿ ತೊಡಗಿಸಿಕೊಂಡರು. ಆ ಮೂಲಕ ತಮ್ಮ ಹೊರ ರಾಜ್ಯದಲ್ಲಿದ್ದಾಗಲೂ ತಮ್ಮ ಧಾರ್ಮಿಕ ನಿಷ್ಠೆಯನ್ನು ತಪ್ಪದೇ ಪಾಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ