ಹಳೇ ವೈಷಮ್ಯಕ್ಕೆ ವ್ಯಕ್ತಿ ಮೇಲೆ ಹಲ್ಲೆ

ಮಂಗಳವಾರ, 3 ಮೇ 2022 (20:00 IST)
ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನ ಮೇಲೆ ಬಿಯರ್ ಬಾಟಲ್ ಗಳಿಂದ ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯೆ ಬನ್ನೂರಿನ ಬಾರ್ ವೊಂದರಲ್ಲಿ ನಡೆದಿದೆ. 29 ವರ್ಷದ ದಯಾನಂದ್ ಹಲ್ಲೆಗೊಳಗಾದ ವ್ಯಕ್ತಿ. ಬನ್ನೂರಿನ ಬಾರ್ ಅಂಡ್ ರೆಸ್ಟೋರೆಂಟ್​​ನಲ್ಲಿ ದಯಾನಂದ್ ವೆಹಿಕಲ್ ಲೋನ್  ಸೆಟಲ್ ಮೆಂಟ್ ಮಾಡುತ್ತಿದ್ದ ವೇಳೆ ಅಟ್ಯಾಕ್ ನಡೆಸಲಾಗಿದ್ದು, ಹಲ್ಲೆ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ದಯಾನಂದ್ ಬನ್ನೂರು ತೊರೆದು ಮೈಸೂರಿನಲ್ಲಿ ವಾಸವಿದ್ದ‌. 6 ತಿಂಗಳ ಹಿಂದೆ ಮತ್ತೆ ಬನ್ನೂರಿಗೆ ವಾಪಸ್ ಆಗಿದ್ದ. ಇವನು ಬಾರ್​​ನಲ್ಲಿರುವ ಮಾಹಿತಿ ಅರಿತ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ಕುರಿತು ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ