ಮಳೆಯಿಂದ ಅನಾಹುತ- ಎಚ್ ಡಿ ಕೆ ಕಿಡಿ

ಭಾನುವಾರ, 22 ಮೇ 2022 (19:52 IST)
ಬೆಂಗಳೂರಿನಲ್ಲಿ ಮಳೆ ಅವಾಂತರ ಹಿನ್ನಲೆಯಲ್ಲಿ 8 ವಲಯಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಮುಖ್ಯಮಂತ್ರಿಗಳು ಮಂತ್ರಿಗಳಿಗೆ ಬೆಂಗಳೂರಿನಲ್ಲಿ ವಲಯವಾರು ಉಸ್ತುವಾರಿ ಕೊಟ್ಟಿದ್ದಾರೆ. ಆದ್ರೆ ಅಶ್ವತ್ಥ್ ನಾರಾಯಣ್ ಅವರು ವಿದೇಶಕ್ಕೆ ತೆರಳಿದ್ದಾರೆ .ಅವರು ಉಸ್ತುವಾರಿ ತೆಗೆದುಕೊಂಡ ವಲಯ ನೋಡುವವರು ಯಾರು?. ಸಿಎಂ ಬಸವರಾಜ ಬೊಮ್ಮಾಯಿ ದಾವೋಸ್‌ಗೆ ತೆರಳಿದ್ದಾರೆ. ಬೆಂಗಳೂರು ಉಸ್ತುವಾಗಿ ಹಾಗೂ ನಗರಾಭಿವೃದ್ಧಿ ಎರಡೂ ಸಿಎಂ ಬಳಿಯೇ ಇದೆ. ಬೆಂಗಳೂರಿನಲ್ಲಿ ಮಳೆಯಿಂದಾಗಿ ಸಾಲು ಸಾಲು ಸಮಸ್ಯೆಗಳಾಗಿವೆ. ಸಿಎಂ ಹೂಡಿಕೆದಾರರನ್ನು ಹೇಗೆ ಆಹ್ವಾನ ಕೊಡುತ್ತಾರೆಂದು ಹೆಚ್ಡಿಕೆ ವ್ಯಂಗ್ಯವಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ