YSV ದತ್ತಾ ಜೊತೆ ಆನಂದ್ ಸಂಧಾನ ವಿಫಲ

ಶನಿವಾರ, 8 ಏಪ್ರಿಲ್ 2023 (20:05 IST)
ಕಡೂರು ಮಾಜಿ ಶಾಸಕ Y.S.V ದತ್ತಾ JDSನಿಂದ ಟಿಕೆಟ್​​​ ಕನ್ಫರ್ಮ್​ ಆಗಿದ್ರೂ ಸಹ JDS ವರಿಷ್ಠರೊಂದಿಗೆ ಮುನಿಸಿಕೊಂಡು ಕಾಂಗ್ರೆಸ್​ ಮನೆ ಸೇರಿದ್ರು.ಆದರೆ ದತ್ತಾ ಪವರ್  ಆಡಿಯೋದಲ್ಲಿ KPCC ಅಧ್ಯಕ್ಷ D.K. ಶಿವಕುಮಾರ್​ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿದ್ದು, ಕಾಂಗ್ರೆಸ್​​ ಟಿಕೆಟ್​​ ಮಿಸ್​​​ ಆಗಲು ಕಾರಣವಾಗಿದೆ. ಕೈ ಟಿಕೆಟ್​ ಮಿಸ್​ ಆದ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್​​ಗೂ ಗುಡ್​​ಬೈ ಹೇಳುವ ಸಾಧ್ಯತೆಯಿದೆ.. ಈ ಹಿನ್ನೆಲೆಯಲ್ಲಿ ಕಡೂರು ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಆನಂದ್ Y.S.V ದತ್ತಾ ಜೊತೆ ಸಂಧಾನ ಸಭೆ ನಡೆಸಿದ್ದು, ಈ ಸಭೆ ವಿಫಲವಾಗಿದೆ.. ಸಂಧಾನ ಸಭೆಯಲ್ಲಿ Y.S.V ದತ್ತಾ ಕಾಂಗ್ರೆಸ್​ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ, ಬೆಂಬಲಿಗರ ನಿರ್ಧಾರವೇ ಅಂತಿಮ ಎಂದು ಹೇಳಿದ್ದಾರೆ.. ದತ್ತಾ ಮರಳಿ JDS ಸೇರ್ತಾರಾ ಅಥವಾ AAP ಪಕ್ಷಕ್ಕೆ ಜಂಪ್​​ ಮಾಡ್ತಾರಾ? ಇಲ್ಲವೇ ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್​, JDSಗೆ ಟಕ್ಕರ್​ ಕೊಡ್ತಾರಾ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ