ಎಲ್ಲಿ ಉತ್ತರ ಕೊಡ್ಬೇಕೋ ಅಲ್ಲೇ ಕೊಡ್ತೀನಿ

ಶುಕ್ರವಾರ, 11 ಆಗಸ್ಟ್ 2023 (21:45 IST)
ಗುತ್ತಿಗೆದಾರರು ಮೊನ್ನೆ ಡಿಸಿಎಂ ಡಿ.ಕೆ.ಶಿವಕುಮಾರ್ ನಮ್ಮ ಬಳಿ ಪರ್ಸಂಟೇಜ್ ಲೆಕ್ಕದಲ್ಲಿ ಕಮಿಷನ್ ಕೇಳಿದ್ದಾರೆ. ಅವರು ಕೇಳಿಲ್ಲ ಎಂತಾದರೆ ಅವರು ನಂಬಿರುವ ಅಜ್ಜಯ್ಯನ ಸನ್ನಿಧಿಯಲ್ಲಿ ಬಂದು ಆಣೆ ಮಾಡಲಿ ಎಂದು ಹೇಳಿದ್ದರು. ಈ ಬಗ್ಗೆ ಸದಾಶಿವನಗರ ನಿವಾಸದ ಬಳಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ರಸ್ತೆಯಲ್ಲಿ ಹೋಗುವವರ ಪ್ರಶ್ನೆಗೆಲ್ಲಾ ನಾನು ಉತ್ತರ ಕೊಡಲ್ಲ, ಎಲ್ಲಿ ಉತ್ತರ ಕೊಡಬೇಕೋ ಅಲ್ಲೇ ಕೊಡುವೆ. ಬಿಜೆಪಿ ನಾಯಕರು ಯಾಕೆ ಬಿಲ್ ಕ್ಲಿಯರ್ ಮಾಡ್ಲಿಲ್ಲ ಎಂದು ಬಿಜೆಪಿಯವರನ್ನೇ ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ