ಅಶ್ವತ್ಥ್​​ ನಾರಾಯಣ್​ಗೆ ಸಂತ್ರಸ್ತರ ತರಾಟೆ

ಸೋಮವಾರ, 8 ಆಗಸ್ಟ್ 2022 (16:15 IST)
ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ರಾಮನಗರದಲ್ಲಿ ಭಾರಿ ಅವಾಂತರ ಸೃಷ್ಠಿಯಾಗಿದೆ. ಮಳೆಯಿಂದಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆ ಹಾನಿ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್​​ ನಾರಾಯಣ್​​​ ಭೇಟಿ ನೀಡಿದ್ರು. ಕುದೂರು ಗ್ರಾಮದಲ್ಲಿ ಕೆರೆ ನೀರಿನಿಂದ ಮುಳುಗಡೆಯಾಗಿದ್ದ ಮನೆಗಳ ವೀಕ್ಷಣೆ ಮಾಡಲು ತೆರಳಿದ್ದ ಸಚಿವರ ಕಾರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ ಪ್ರಸಂಗವೂ ನಡೆಯಿತು. ಮಳೆಯಿಂದಾಗಿ ಮನೆ ಕಳೆದುಕೊಂಡಿದ್ದೇವೆ. ನಮಗೆ ನಿವೇಶನವನ್ನು ನೀಡಿ ಎಂದು ಮಹಿಳೆಯರು ಸಚಿವರೆದುರು ಕಣ್ಣೀರು ಹಾಕಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ