ವಿಧಾನಸಭೆ ಚುನಾವಣೆ ಸಿದ್ದತೆ: ಕೆಪಿಸಿಸಿಯಿಂದ "ಕಾರು ಭಾಗ್ಯ"

ಶನಿವಾರ, 24 ಜೂನ್ 2017 (12:28 IST)
ಮುಂಬರುವ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಸಿದ್ದತೆ ಆರಂಭಿಸಿದ್ದು, ರಾಜ್ಯದಾದ್ಯಂತ ಪ್ರವಾಸಕ್ಕಾಗಿ ಐದು ಇನೋವಾ ಕಾರುಗಳನ್ನು ಖರೀದಿಸಿದೆ.
 
ಇದೀಗ ಮೂರು ಕಾರುಗಳು ಕಾಂಗ್ರೆಸ್ ಕಚೇರಿಗೆ ತಲುಪಿದ್ದು, ಇನ್ನೆರಡು ಕಾರುಗಳು ಕೆಲ ದಿನಗಳ ನಂತರ ತಲುಪಲಿವೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ. 
 
ರಾಜ್ಯ ಉಸ್ತುವಾರಿ ಹೊತ್ತಿರುವ ವೇಣುಗೋಪಾಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್ ಮತ್ತು ಎಸ್‌.ಆರ್.ಪಾಟೀಲ್‌ ಹೊಸ ಕಾರುಗಳನ್ನು ಬಳಸಲಿದ್ದಾರೆ.
 
ವೇಣುಗೋಪಾಲ್, ಸರಕಾರಿ ಕಾರು ಬಳಸಲು ಹಿಂದೇಟು ಹಾಕಿದ್ದರಿಂದ ಅವರಿಗೆ ಪಕ್ಷದ ವತಿಯಿಂದ ಇನೋವಾ ಕಾರು ನೀಡಲಾಗಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ.
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ