ಪತ್ನಿಯ ಎದುರು ಯಾಕೆ ಮಹಜರು ಮಾಡಿಲ್ಲ: ಸಿಎಂಗೆ ಬೋಪಯ್ಯ ತಿರುಗೇಟು

ಬುಧವಾರ, 13 ಜುಲೈ 2016 (13:10 IST)
ಮಂಗಳೂರು ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಅವರ ಪತ್ನಿ ಎದುರು ಏಕೆ ಮಹಜರು ಮಾಡಿಸಿಕೊಂಡಿಲ್ಲ ಎಂದು ಸದನದಲ್ಲಿ ಕೆ.ಸಿ.ಬೋಪಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ.
 
ಸದನದಲ್ಲಿ ಕೆ.ಸಿ.ಬೋಪಯ್ಯ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾವುದೇ ಆತ್ಮಹತ್ಯೆ ಪ್ರಕರಣದಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಹತ್ತಿರದ ಸಂಬಂಧಿಕರನ್ನು ಕರೆಸಿ ಮಹಜರು ಮಾಡಿಸಿಕೊಂಡು ನಂತರ ಸಂಬಂಧ ಪಟ್ಟವರಿಗೆ ಮಾಹಿತಿ ನೀಡುವುದು ರೂಢಿಯಲ್ಲಿದೆ ಎಂದು ಉತ್ತರಿಸಿದರು.
 
ಇದಕ್ಕೆ ಪ್ರತಿಕ್ರಿಯೆ ನೀಡಿದ ಸದನದಲ್ಲಿ ಕೆ.ಸಿ.ಬೋಪಯ್ಯ, ಎಂ.ಕೆ.ಗಣಪತಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಯುತ್ತಿದಂತೆ ನಾವು ಮಡಿಕೇರಿಯ ವಿನಾಯಕ ಲಾಡ್ಜ್‌ಗೆ ತೆರಳಿದ್ದೆವು. ಆದರೆ, ಪೊಲೀಸರು ನಮ್ಮನ್ನು ಲಾಡ್ಜ್‌ನಿಂದ ಹೊರಗಡೆ ಕಳುಹಿಸಿ, ಗಣಪತಿ ಸಹೋದರ ಡಿವೈಎಸ್‌ಪಿ ತಮ್ಮಯ್ಯ ಅವರಿಂದ ಮಹಜರು ಮಾಡಿಸಿಕೊಂಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ಎಂದು ತಿರುಗೇಟು ನೀಡಿದರು.
 
ಕೇವಲ ರಾಜಕೀಯ ಕಾರಣಗಳಿಗಾಗಿ ಹೇಳಿಕೆ ನೀಡುತ್ತಿಲ್ಲ. ನನ್ನ ಪ್ರತಿಯೊಂದು ಹೇಳಿಕೆಗೆ ಆಧಾರಗಳಿವೆ. ಆಧಾರಗಳಿಲ್ಲದೇ ನಾವು ಮಾತನಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ