ಅಯೋಧ್ಯೆ ತೀರ್ಪು : ಸಚಿವರಿಗೆ ಖಡಕ್ ಸೂಚನೆ ನೀಡಿದ ಸಿಎಂ

ಭಾನುವಾರ, 3 ನವೆಂಬರ್ 2019 (18:51 IST)
ವಿವಾದಿತ ರಾಮ ಜನ್ಮಭೂಮಿ ಹಾಗೂ ಬಾಬರಿ ಮಸೀದಿ ಕುರಿತು ಕೋರ್ಟ್ ತೀರ್ಪು ಹೊರಬೀಳೋಕೆ ದಿನಗಣನೆ ಶುರುವಾಗಿರುವಾಗಲೇ ಸಿಎಂ ಖಡಕ್ ಸೂಚನೆ ರವಾನೆ ಮಾಡಿದ್ದಾರೆ.

ಪಕ್ಷದ ಯಾವ ಕಾರ್ಯಕರ್ತರೂ ಹಾಗೂ ಸಚಿವರು ಅಯೋಧ್ಯೆ ತೀರ್ಪು ಬಂದ ಬಳಿಕ ಅಥವಾ ಅದಕ್ಕೂ ಮೊದಲೇ ಯಾವುದೇ ರೀತಿಯ ಹೇಳಿಕೆ ನೀಡಬಾರದು ಅಂತ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ತೀರ್ಪು ಯಾರ ಪರವಾಗಿ ಬಂದರೂ ಸಂಭ್ರಮಾಚರಣೆ ಮಾಡಬಾರದು. ಇದರಿಂದ ಮತ್ತೊಂದು ಸಮುದಾಯಕ್ಕೆ ಧಕ್ಕೆಯಾಗಿ ಕೆರಳಿಸುತ್ತದೆ ಅಂತ ಬಿಜೆಪಿ ಮುಖಂಡರು ಹೇಳಿದ್ದಾರೆ. 


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ