ಕುದಿಯುವ ಎಣ್ಣೆಯಲ್ಲಿ ಕೈ ಹಾಕಿದ ನೂರಾರು ಅಯ್ಯಪ್ಪ ಮಾಲಾಧಾರಿಗಳು - ವಿಸ್ಮಯ

ಸೋಮವಾರ, 6 ಜನವರಿ 2020 (18:38 IST)
ಅಯ್ಯಪ್ಪ ಮಾಲಾಧಾರಿಗಳು ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ವಡೆ ತಗೆಯುವ ಮೂಲಕ ಎಣ್ಣೆ ಸೇವೆ ಸಲ್ಲಿಸಿದ್ದಾರೆ.

ಅಯ್ಯಪ್ಪ ಭಕ್ತಾದಿಗಳು ಅಯ್ಯಪ್ಪ ನಾಮ ಸ್ಮರಣೆಯಲ್ಲಿ ತೊಡಗಿಕೊಂಡಿದ್ದಾರೆ. ಇದರ ನಡುವೆ ಹುಬ್ಬಳ್ಳಿಯ ಶಬರಿನಗರದಲ್ಲಿ ಅಯ್ಯಪ್ಪ ಮಾಲಾಧಾರಿಗಳು ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ವಡೆ ತಗೆಯುವ ಮೂಲಕ ಎಣ್ಣೆ ಸೇವೆ ಸಲ್ಲಿಸಿದ್ದಾರೆ.

ನೂರಾರು ಅಯ್ಯಪ್ಪ ಮಾಲಾಧಾರಿಗಳು, ಕುದಿ ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ವಡೆಯನ್ನು ತಗೆದು ಭಕ್ತಿಯ ಸಮರ್ಪಣೆ ಮಾಡಿದರು. 

ಒಂದು ಹನಿ ಸುಡುವ ಎಣ್ಣೆ ಮೈಮೇಲೆ ಬಿದ್ದರೆ ಬೊಬ್ಬೆ ಏಳುತ್ತದೆ‌. ಆದ್ರೆ ಎಣ್ಣೆಯಲ್ಲಿ ಕೈ ಎದ್ದಿದರೂ ಸುಟ್ಟ ಗಾಯಗಳಾಗದಿರುವದು ವಿಶೇಷ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ