ಜಾತಿ ಲೆಕ್ಕಾಚಾರದಲ್ಲಿ ಹೈ ವೋಲ್ಟೇಜ್ ಕದನವಾದ ಬಾದಾಮಿ

ಬುಧವಾರ, 2 ಮೇ 2018 (13:26 IST)
ಜಾತಿ ಲೆಕ್ಕಾಚಾರದಲ್ಲಿ ಹೈ ವೋಲ್ಟೇಜ್ ಕದನವಾದ ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹೈದ್ರಾಬಾದ್ ಕನಾ೯ಟಕದ ವಾಲ್ಮೀಕಿ ಸಮುದಾಯ ತೊಡೆ ತಟ್ಟಿದೆ. 
ನಿನ್ನೆ ರಾತ್ರಿ ಬಾದಾಮಿ ಮತಕ್ಷೇತ್ರಕ್ಕೆ ಆಗಮಿಸಿದ ಹೈದ್ರಾಬಾದ್ ಕನಾ೯ಟಕದ  6  ಜಿಲ್ಲೆಗಳ ತಂಡಗಳು, ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಸೋಲಿಸಲು ರಾಮುಲು ಪರ ಪ್ರಚಾರಕ್ಕೆ ಆಗಮಿಸಿವೆ. ಹೈ-ಕ ವಾಲ್ಮೀಕಿ ಸಮುದಾಯದ  ವಿಭಾಗೀಯ  ಅಧ್ಯಕ್ಷ ನಂದಕುಮಾರ ಪಾಟೀಲ, ಕಾಯ೯ದಶಿ೯ ರಘುವೀರ ನಾಯಕ್ , ಯಾದಗಿರಿ ಜಿಲ್ಲಾದ್ಯಕ್ಷ ಮರಿಯಪ್ಪ ನಾಯಕ ಸೇರಿದಂತೆ 6 ಜಿಲ್ಲೆಗಳ ಪದಾಧಿಕಾರಿಗಳ ತಂಡಗಳು ಹೈದರಾಬಾದ್ ಕನಾ೯ಟಕದ ರಾಯಚೂರು, ಯಾದಗಿರ, ಕಲಬುಗಿ೯, ಕೊಪ್ಪಳ, ಬೀದರ, ಬಳ್ಳಾರಿ ಜಿಲ್ಲೆಗಳಿಂದ 100 ಕ್ಕೂ ಅಧಿಕ ಜನರ ತಂಡ ಬದಾಮಿಗೆ ಆಗಮಿಸಿದೆ. 
 
ಬಾದಾಮಿ, ಗುಳೇದಗುಡ್ಡ, ಶಿವಯೋಗಿ ಮಂದಿರದಲ್ಲಿ ಬೀಡು ಬಿಟ್ಟಿರುವ ತಂಡಗಳು. ಇಂದಿನಿಂದ ನಿರಂತರ 3 ದಿನಗಳ ಕಾಲ ಸಿಎಂ ವಿರುದ್ಧ ಪ್ರಚಾರಕ್ಕೆ ಇಳಿಯಲಿವೆ. ಮೀಸಲಾತಿ ವಿಚಾರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಮಾಡಿದ ಸಿಎಂ ವಿರುದ್ಧ ಗರಂ ಆಗಿರೋ ನಾಯಕರು.ಇದರಿಂದಾಗಿ ಬಾದಾಮಿ ಮತಕ್ಷೇತ್ರದ ವಾಲ್ಮೀಕಿ ಸಮುದಾಯದ ಮತ ಸೆಳೆಯಲು ಬಂದಿದ್ದ ಕಾಂಗ್ರೆಸ್ ನ ಸತೀಶ ಜಾರಕಿಹೊಳಿ ತಂತ್ರ ಬುಡಮೇಲಾದಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ