'ಬೈಕೊಂಡು ಹೋದ್ರೆ ಕೈ ಅಧಿಕಾರಕ್ಕೆ ಬರಲ್ಲ'

ಮಂಗಳವಾರ, 19 ಏಪ್ರಿಲ್ 2022 (21:20 IST)
ಕಾಂಗ್ರೆಸ್​​​ನವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಸುಮ್ಮನೆ ಬಿಜೆಪಿ ಪಕ್ಷವನ್ನ ಬೈಕೊಂಡು ಹೋಗೋದು ಕಾಂಗ್ರೆಸ್ ಕೆಲಸವಾಗಿದೆ ಎಂದು ಕೃಷಿ ಸಚಿವ ಬಿ. ಸಿ ಪಾಟೀಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೈಕೊಂಡು ಹೋದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ ಕನಸು ಕಂಡ್ರೆ ಅದು ಮೂರ್ಖತನ. ಸುಖಾಸುಮ್ಮನೆ ಸರ್ಕಾರದ ವಿರುದ್ದ ಹೋರಾಟ ಮಾಡ್ತಿದ್ದಾರೆ. ನಮಗೆ ಅಭಿವೃದ್ಧಿ ಮಾಡುವ ಕೆಲಸ ಇದೆ. ಬಿಜೆಪಿಯವರು ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಕಾಂಗ್ರೆಸ್​​​​ನವರು ಜಾತಿ ಧರ್ಮದ ಬಗ್ಗೆ ಚರ್ಚೆ ಮಾಡ್ತಾರೆಂದು ಚಿಕ್ಕಬಳ್ಳಾಪುರದಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ