ಮಾರತ್ಹಳ್ಳಿಯಲ್ಲಿರುವ ಸಾಫ್ಟ್ವೇರ್ ಕಂಪೆನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ 35 ವರ್ಷ ವಯಸ್ಸಿನ ಎರಡು ಮಕ್ಕಳ ತಂದೆಯಾದ ರಿತೇಶ್ ಕುಮಾರ್, ಪುತ್ರನಿಗೆ ಶಾಲೆಯಲ್ಲಿ ಪ್ರವೇಶ ದೊರೆಯಲಿಲ್ಲ ಎನ್ನುವ ಕಾರಣಕ್ಕೆ ನೊಂದು ತಮ್ಮನ್ನು ತಾವೇ ಬೆಂಕಿ ಹಚ್ಚಿಕೊಂಡಿದ್ದರು. ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟ್ಯೂಶನ್ ಸೆಂಟರ್ ನಡೆಸುತ್ತಿರುವ ಏಜೆಂಟ್ ಆದಿತ್ಯ ಬಜಾಜ್, ರಿತೇಶ್ ಕುಮಾರ್ನಿಗೆ 6 ಲಕ್ಷ ರೂಪಾಯಿಗಳನ್ನು ನೀಡಿದಲ್ಲಿ ಪುತ್ರನಿಗೆ ಪ್ರತಿಷ್ಠಿತ ಶಾಲೆಯಲ್ಲಿ ಅಢ್ಮಿಶನ್ ಕೊಡಿಸುವುದಾಗಿ ಹೇಳಿದ್ದ. ಇದನ್ನು ನಂಬಿದ ಕುಮಾರ್ ಆತನಿಗೆ ಮುಂಗಡವಾಗಿ 2.5 ಲಕ್ಷ ರೂಪಾಯಿ ನೀಡಿದ್ದ. ಆದರೆ, ಅಡ್ಮಿಶನ್ ದೊರೆಯದಿರುವ ಹಿನ್ನೆಲೆಯಲ್ಲಿ ಹಣ ನೀಡುವಂತೆ ಕುಮಾರ್ ಆದಿತ್ಯನಿಗೆ ಒತ್ತಾಯಿಸಿದ್ದ. ತದನಂತರ ಆದಿತ್ಯ ಕುಮಾರನಿಗೆ 1.25 ಲಕ್ಷ ರೂಪಾಯಿಗಳನ್ನು ಮರಳಿಸಿ ಉಳಿದ ಹಣವನ್ನು 10 ದಿನಗಳೊಳಗಾಗಿ ಮರಳಿಸುವುದಾಗಿ ತಿಳಿಸಿದ್ದ ಎನ್ನಲಾಗಿದೆ.