ಬಿಎಸ್‌ವೈಗೆ ಟಾಂಗ್ ನೀಡಿ, ಪ್ರಹ್ಲಾದ್ ಜೋಷಿಗೆ ಸಿಎಂ ಸ್ಥಾನದ ಸಂಚು: ಯಾತ್ನಾಳ್

ಮಂಗಳವಾರ, 13 ಜೂನ್ 2017 (19:00 IST)
ಬಿಜೆಪಿ ಹಿರಿಯ ಮುಖಂಡ ಪ್ರಹ್ಲಾದ್ ಜೋಷಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದೇ ಭಾನುಪ್ರಕಾಶ್ ರೂಪಿಸಿರುವ ಪ್ಲ್ಯಾನ್ ಎಂದು ವಿಧಾನಪರಿಷತ್ ಸದಸ್ಯ ಬಸವನಗೌಡ ಯಾತ್ನಾಳ್ ಆರೋಪಿಸಿದ್ದಾರೆ.
 
ಶಿವಮೊಗ್ಗ ಜಿಲ್ಲೆಯ ಬಿಜೆಪಿ ನಾಯಕರಲ್ಲಿ ಜಗಳ, ಅಸಮಾಧಾನ ಮೂಡಿಸಿ ಬಿಕ್ಕಟ್ಟು ಸೃಷ್ಟಿಸಿರುವ ಹಿಂದೆ ಭಾನುಪ್ರಕಾಶ ಕೈವಾಡವಿರಬಹುದು ಎನ್ನುವ ವರದಿಗಳು ಹರಡಿವೆ ಎಂದು ತಿಳಿಸಿದ್ದಾರೆ.
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮಧ್ಯೆ ಭಿನ್ನಾಭಿಪ್ರಾಯ ತಂದಿಟ್ಟಿದ್ದೆ ಈ ಮಹಾನ್ ನಾಯಕ ಎಂದು ಕಿಡಿಕಾರಿದ್ದಾರೆ.
 
ಇಬ್ಬರ ನಡುವಿನ ವೈಮನಸ್ಸು, ಭಿನ್ನಾಭಿಪ್ರಾಯವನ್ನು ಕೇಶವ ಕೃಪಾದ ಸಂತೋಷ್‌ಜೀಯವರಿಗೆ ತಲುಪಿಸಿ ತದನಂತರ ಭಿಕ್ಕಟ್ಟು ಪರಿಹರಿಸುವ ನೆಪದಲ್ಲಿ ಪ್ರಹ್ಲಾದ್ ಜೋಶಿಯನ್ನು ಮುಖ್ಯಮಂತ್ರಿಯನ್ನಾಗಿಸುವುದು ಭಾನುಪ್ರಕಾಶ್ ರಣತಂತ್ರವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಬಸವನಗೌಡ ಪಾಟೀಲ್ ಯಾತ್ನಾಳ್ ವಾಗ್ದಾಳಿ ನಡೆಸಿದ್ದಾರೆ. 
 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ