ಅದೇನ್ ಸಿಡಿ.. ಬಿಡುಗಡೆ ಮಾಡಿ ನೋಡೇ ಬಿಡೋಣ: ಬಿಜೆಪಿ

ಮಂಗಳವಾರ, 28 ಫೆಬ್ರವರಿ 2017 (16:20 IST)
ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಪರಸ್ಪರ ತಳ್ಳಾಟ, ನೂಕಾಟ ನಡೆಸಿದಾಗ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ.
 
ಬಿಜೆಪಿಯವರ ಕರ್ಮಕಾಂಡವನ್ನು ಬಹಿರಂಗಗೊಳಿಸುತ್ತೇನೆ ಎಂದು ಕಾಂಗ್ರೆಸ್ ಸದಸ್ಯ ಜಿ.ಕೆ ವೆಂಕಟೇಶ್ ಸಿಡಿ ತೋರಿಸಿದಾಗ ಉದ್ರಿಕ್ತಗೊಂಡ ಬಿಜೆಪಿ ಸದಸ್ಯರು, ಸಿಡಿ ತೋರಿಸಿ ನೋಡಿಯೇ ಬಿಡೋಣ ಎಂದು ತಿರುಗೇಟು ನೀಡಿದರು.
 
ಬಿಜೆಪಿ ಸದಸ್ಯರು ಕೂಡಲೇ ಸಿಡಿ ಬಹಿರಂಗಗೊಳಿಸುವಂತೆ ಒತ್ತಡ ಹೇರಿದಾಗ ಕಾಂಗ್ರೆಸ್ ಸದಸ್ಯರು ಕೂಡಾ ತೀವ್ರ ಪ್ರತಿರೋಧ ವ್ಯಕ್ತಪಡಿಸಿದಾಗ ಕೋಲಾಹಲ ಸೃಷ್ಟಿಸಿದೆ.
 
ಮಾಜಿ ಮೇಯರ್ ಮಂಜುನಾಥ್ ಮಾತನಾಡಿ, ಬಿಜೆಪಿ ಸದಸ್ಯರ ಗುಂಡಾ ವರ್ತನೆ ವಿಷಾದಕರ ಸಂಗತಿ. ಯಾವ ಕಾರಣದಿಂದ ಬಿಜೆಪಿ ಗದ್ದಲ ಸೃಷ್ಟಿಸಲು ಬಯಸುತ್ತದೆ ಎನ್ನುವುದು ತಿಳಿದಿಲ್ಲ. ಮೇಯರ್ ಪದೇ ಪದೇ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ವೆಂಕಟೇಶ್, ನಿಮ್ಮ ನಾಯಕ ಯಡಿಯೂರಪ್ಪನ ಸಿಡಿ ಬಹಿರಂಗವಾಗಿದೆ. ಇದೀಗ ನಿಮ್ಮ ಕರ್ಮಕಾಂಡದ ಸಿಡಿ ಬಹಿರಂಗಗೊಳಿಸುತ್ತೇನೆ ಎಂದು ಹೇಳಿದ್ದರಿಂದ ಉದ್ರಿಕ್ತಗೊಂಡ ಬಿಜೆಪಿ ಸದಸ್ಯರು ಪ್ರತಿಭಟನೆ ತೋರಿದ್ದಾರೆ ಎಂದು ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ