ಒತ್ತುವರಿ ತೆರವು: ಮಾಜಿ ಸಚಿವ ಶಾಮನೂರು ಕುಟುಂಬಕ್ಕೂ ಬಿಸಿ

ಗುರುವಾರ, 18 ಆಗಸ್ಟ್ 2016 (14:26 IST)
ರಾಜಕಾಲುವೆ ಒತ್ತುವರಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೂ ಬಿಸಿ ಮಟ್ಟುವ ಸಂಭವವಿದೆ.
 
ಕಂದಾಯ ಇಲಾಖೆಯ ಸೂಪರ್ ಇಂಪೂಸ್ ಮ್ಯಾಪ್‌ ದಾಖಲಾತಿಯ ಪ್ರಕಾರ, ಕೆರೆ ಒತ್ತುವರಿಯಾದ ಜಾಗದಲ್ಲಿ ಸರ್ವೆ ನಂಬರ್ 52 ರಲ್ಲಿ ಶಾಮನೂರು ಶಿವಶಂಕರಪ್ಪ ಒಡೆತನದಲ್ಲಿ ಎಸ್‌.ಎಸ್‌.ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸುತ್ತಿದೆ.
 
ಮಾಚಿ ಸಚಿವ ಶಾಮನೂರು ಶಿವಶಂಕರಪ್ಪ ಕುಟುಂಬ ವರ್ಗಕ್ಕೆ ಸೇರಿರುವ ಎಸ್‌.ಎಸ್‌.ಆಸ್ಪತ್ರೆ ಮೂರು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದೆ. ಒತ್ತುವರಿಯಾದ ಜಾಗದಲ್ಲಿ ಆಸ್ಪತ್ರೆ ನಿರ್ಮಿಸಲಾಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ ತೆರವುಗೊಳಿಸುವ ಸಂಭವವಿದೆ.


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ