ಸಿಆರ್ ಪಿಎಫ್ ಯೋಧನ ಮೇಲೆ ದರ್ಪ ತೋರಿದ ಬೆಳಗಾವಿ ಪೊಲೀಸರು

ಸೋಮವಾರ, 27 ಏಪ್ರಿಲ್ 2020 (08:45 IST)
Normal 0 false false false EN-US X-NONE X-NONE

ಬೆಳಗಾವಿ : ಲಾಕ್ ಡೌನ್ ನಡುವೆ ಕ್ಷುಲ್ಲಕ ಕಾರಣಕ್ಕೆ ಸಿಆರ್ ಪಿಎಫ್ ಯೋಧನ ಮೇಲೆ ಬೆಳಗಾವಿ ಪೊಲೀಸರು ದರ್ಪ ಮೆರೆದಿದ್ದಾರೆ. ಎಂಬುದಾಗಿ ತಿಳಿದಬಂದಿದೆ.

 

ಬೆಳಗಾವಿಯಲ್ಲಿ  ಯೋಧ ಸಚಿನ್ ಸಾವಂತ್ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಯೋಧ ಮನೆ ಮುಂದೆ ಬೈಕ್ ತೊಳೆಯುತ್ತಿದ್ದ ವೇಳೆ  ಯಾಕೆ ಮಾಸ್ಕ್ ಹಾಕಿಕೊಂಡಿಲ್ಲ ಎಂದು ಪೊಲೀಸರ ದರ್ಪ ತೋರಿ ಲಾಠಿಯಿಂದ ಹಲ್ಲೆ ನಡೆಸಿದ್ದಾರೆ.

 

 ಸಿಆರ್ ಪಿಎಫ್ ಕೋಬ್ರಾ ಕಮಾಂಡೋ ಎಂದ್ರೂ ಗೌರವ ನೀಡದೆ  ಅವಾಚ್ಯ ಶಬ್ದಗಳಿಂದ ನಿಂದಿಸಿ ಲಾಠಿಯಿಂದ ಹೊಡೆಯಲು ಯತ್ನಿಸಿದ್ದಲ್ಲದೇ ಯೋಧನ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ