Bengaluru Stampede, ಡಿಸಿಎಂ ಕ್ರೆಡಿಟ್ ಪಡೆಯಲು ಹೋಗಿ ಈ ಅನಾಹುತ ನಡೆದಿದೆ: ನಿಖಿಲ್ ಕುಮಾರಸ್ವಾಮಿ

Sampriya

ಶುಕ್ರವಾರ, 6 ಜೂನ್ 2025 (17:07 IST)
Photo Courtesy X
ಬೆಂಗಳೂರು: ಅಭಿಮಾನಿಗಳ ಸಾವಿನ ಸುದ್ದಿ ತಿಳಿದ ಮೇಲೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಪ್‌ಗೆ ಮುತ್ತು ಕೊಟ್ಟು ಸಾವಿನಲ್ಲೂ ಸಂಭ್ರಮ ಮಾಡ್ತಾರಿವ ಡಿಕೆ ಶಿವಕುಮಾರ್‌ ಅವರು ಡಿಸಿಎಂ ಅಲ್ಲ ರೀಲ್ಸ್‌ ಮಿನಿಸ್ಟರ್‌  ಎಂದು ಡಿಕೆಶಿ ವಿರುದ್ಧ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಪೊಲೀಸರನ್ನು ಅಮಾನತು ಮಾಡಿದ್ದಾರೆ. ಖುದ್ದು ಪೊಲೀಸರೇ ಎರಡೆರಡು ಕಡೆ ಕಾರ್ಯಕ್ರಮ ಬೇಡ ಅಂದರು ಸಿಎಂ ಮತ್ತು ಡಿಸಿಎಂ ಕ್ರೆಡಿಟ್ ಪಡೆಯೋಕೆ ಈ ಕಾರ್ಯಕ್ರಮ ಮಾಡಿ ಅನಾಹುತಕ್ಕೆ ಕಾರಣರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ನೆಟ್‌ವರ್ಕ್‌ ಇಲ್ಲದ ಕಾರಣ ನನಗೆ ಕಾಲ್ತುಳಿತದ ಸಾವಿನ ವಿಷಯ ಗೊತ್ತಾಗಿರ್ಲಿಲ್ಲ. ನಾನು ಮಾಧ್ಯಮಗಳ ಮೂಲಕ ವಿಷಯ ತಿಳಿದುಕೊಂಡೆ ಅಂತ ಹೇಳಿದ್ರು, ಅಲ್ಲಿ ಜಾಮಾರ್ ಹಾಕಿದ್ರೆ ವಿಷಯವನ್ನ ನೀವು ಹೇಗೆ ತಿಳಿದುಕೊಂಡ್ರಿ.  ಇದಕ್ಕೆ ಡಿಸಿಎಂ ಅವರೇ ಉತ್ತರಿಸಬೇಕು ಎಂದು ಆಕ್ರೋಶ ಹೊರಹಾಕಿದರು.

ತಮಗೆ ತಾವು ಕ್ರೆಡಿಟ್ ಪಡೆದುಕೊಳ್ಳುವ ಸಲುವಾಗಿ ಅಮಾಯಕರ ಜೀವಗಳನ್ನು ಬಲಿ ಪಡೆದಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಜನರಿಗೆ ಅಭಿಮಾನಿಗಳಿಗೆ ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಬೇಕೆಂದು ಹೇಳಿದ್ರು. ಈಗ ಪೊಲೀಸರನ್ನ ಅಮಾನತು ಮಾಡಿರುವುದು ಕೋತಿ ತಾನು ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಐಎಎಸ್, ಐಪಿಎಸ್ ಅಧಿಕಾರಿಗಳನ್ನ ಮುಂದೆ ಇಡ್ಕೊಂಡು ನಿಮಗೆ ಬೇಕಾದ ತೀರ್ಮಾನ ತೆಗೆದುಕೊಂಡು, ಇದೀಗ ಪೊಲೀಸರ ವಿರುದ್ಧವೇ ಕೂಬೆ ಕೂರಿಸಲಾಗಿದೆ. ಸರ್ಕಾರ ಏನೇ ತಪ್ಪುಮಾಡಿದ್ರು ನಿಮ್ಮ ಮೇಲೆಯೇ ಗೂಬೆ ಕೂರಿಸುತ್ತದೆ. ಈ ಹಿನ್ನೆಲೆಯಲ್ಲಿ ನಿಷ್ಠಾವಂತ ಅಧಿಕಾರಿಗಳಿಗೆ ಕೈಮುಗಿದು ಮನವಿ ಮಾಡುತ್ತೇನೆ. ಇನ್ನಾದರು ಎಚ್ಚೆತ್ತುಕೊಳ್ಳಿ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ