ರಾಜ್ಯಕ್ಕೆ ತಟ್ಟದ ಭಾರತ್ ಬಂದ್ ಬಿಸಿ

ಬುಧವಾರ, 8 ಜನವರಿ 2020 (09:48 IST)
ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳು ಇಂದು ಭಾರತ್ ಬಂದ್ ಕರೆ ಕೊಟ್ಟಿದೆ.



ಆದರೆ ರಾಜ್ಯದಲ್ಲಿ ಬಂದ್ ನಿಂದ ಯಾವುದೇ ಪರಿಣಾಮ ಬೀರಿಲ್ಲ. ಜನಜೀವನ ಎಂದಿನಂತಿದ್ದು, ವಾಹನ ಸಂಚಾರ, ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.


ಹಾಗೇ ಮೆಟ್ರೋ ಸಂಚಾರ ಕೂಡ ಯಥಾ ಸ್ಥಿತಿಯಲ್ಲಿದೆ. ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ನೀಡದೆ ಎಂದಿನಂತೆ ಶುರುವಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ