ಇಂದು ಬಿಜೆಪಿ ಕೋರ್ ಕಮಿಟಿ‌ ಸಭೆ ಮುಂದೂಡಿಕೆ

ಗುರುವಾರ, 8 ಜೂನ್ 2023 (15:10 IST)
ಇಂದು ಬಿಜೆಪಿ ಕಚೇರಿಯಲ್ಲಿ ಗೆದ್ದ ಶಾಸಕರಿಗೆ ಅಭಿನಂದನಾ ಸಭೆ ನಡೆಯಿತು. ಶಾಸಕರ ಜೊತೆ ಮುಂದಿನ ಕಾರ್ಯರೂಪಗಳ ಬಗ್ಗೆ ಬಿಜೆಪಿ ಮುಖಂಡರು ಚರ್ಚೆ ನಡೆಸಿದರು. ಈ ಸಭೆಯಲ್ಲಿ ಮಾಜಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ , ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ಸಿಟಿ ರವಿ, ಸಂಘಟನಾ ಕಾರ್ಯದರ್ಶಿ ಜಿ.ವಿ ರಾಜೇಶ್‌ ಉಪಸ್ಥಿತರಿದ್ದರು.ಇನ್ನು ಸೋಲು ಗೆಲುವಿನ ಪರಾಮರ್ಶೆ ನಡೆಸಲು ಇಂದು ಸಂಜೆಗೆ ನಿಗದಿಯಾಗಿದ್ದ ಕೋರ್‌ ಕಮಿಟಿ ಸಭೆ ರದ್ದಾಗಿದ್ದು ಈ ಸಭೆಯನ್ನ ಮುಂದಿನ ವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ