ಬಿಜೆಪಿ ಜಿಲ್ಲಾಧ್ಯಕ್ಷನಿಗೆ ಜೈಲು ಶಿಕ್ಷೆ

ಶುಕ್ರವಾರ, 26 ಅಕ್ಟೋಬರ್ 2018 (17:01 IST)
ಹೋಟೆಲ್ ಉದ್ಯಮಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಚಿತ್ರದುರ್ಗ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಚಿತ್ರದುರ್ಗ ಪ್ರಧಾನ ಜೆಂಎಂಎಫ್ ಸಿ ನ್ಯಾಯಾಲಯ ತೀರ್ಪು ನೀಡಿದೆ. 10 ಸಾವಿರ ರೂ. ದಂಡ, 1 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಲಾಗಿದೆ.

ನವೀನ್ ಹೋಟೆಲ್ ನಿರ್ದೇಶಕರೂ ಆಗಿದ್ದಾರೆ. ನ್ಯಾಯಾಧೀಶ ಶಮೀರ್. ಪಿ. ನಂದಿಹಾಳ್ ರಿಂದ ಆದೇಶ ಮಾಡಲಾಗಿದೆ.
ಕಾರ್ಮಿಕ ರಾಜ್ಯ ವಿಮಾ ನಿಗಮಕ್ಕೆ ಹಣ ಕಟ್ಟದೆ ವಂಚನೆ ಮಾಡಿರುವ ಪ್ರಕರಣ ಹಿನ್ನೆಲೆಯಲ್ಲಿ ಈ ತೀರ್ಪು ನೀಡಲಾಗಿದೆ.  
2012-13 ನೇ ಸಾಲಿನ 1,54,440 ರೂ. ಹಣ ಕಟ್ಟದೆ ವಂಚನೆ ಮಾಡಿದ ಪ್ರಕರಣ ಇದಾಗಿದೆ.

ಸರ್ಕಾರಿ ಅಭಿಯೋಜಕ ಪಿ.ಪಿ.ತಿಪ್ಪೇಸ್ವಾಮಿರಿಂದ ಸರ್ಕಾರ ಪರ ವಾದ ಮಂಡನೆ ಮಾಡಲಾಗಿತ್ತು.
ಕಾರ್ಮಿಕ ವಿಮಾ ನಿಗಮ ಚಿತ್ರದುರ್ಗ ವಿಭಾಗದಿಂದ ಕೇಸ್ ದಾಖಲಾಗಿತ್ತು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ