ಪಕ್ಷ ಬಿಡದಂತೆ ಮಾಜಿ ಸಚಿವ ವಿಜಯ್ ಶಂಕರ್‌ಗೆ ಬಿಜೆಪಿ ಮುಖಂಡರ ಮನವಿ

ಶುಕ್ರವಾರ, 6 ಅಕ್ಟೋಬರ್ 2017 (18:14 IST)
ಬಿಜೆಪಿ ವರಿಷ್ಠರ ನಡೆಗೆ ಅಸಮಾಧಾನಗೊಂಡು ಬಿಜೆಪಿ ಪಕ್ಷವನ್ನು ತ್ಯಜಿಸುವ ನಿರ್ಧಾರ ಕೈಗೊಂಡಿದ್ದ ಮಾಜಿ ಸಚಿವ ಸಿ.ಎಚ್. ವಿಜಯ್ ಶಂಕರ್ ಮನವೊಲೈಕೆಗೆ ಬಿಜೆಪಿ ನಾಯಕರು ಮುಂದಾಗಿದ್ದಾರೆ.
ನಗರದ ವಿಜಯನಗರದಲ್ಲಿರುವ ವಿಜಯ್ ಶಂಕರ್ ನಿವಾಸಕ್ಕೆ ಆಗಮಿಸಿದ ಮಾಜಿ ಸಚಿವ ರಾಮದಾಸ್, ಮೂಡಾ ಮಾಜಿ ಅಧ್ಯಕ್ಷ ಎಲ್.ನಾಗೇಂದ್ರ ಸೇರಿದಂತೆ ಇತರ ಮುಖಂಡರು ವಿಜಯ್ ಶಂಕರ್ ಅವರಿಗೆ ಪಕ್ಷ ಬಿಡದಂತೆ ಮನವಿ ಮಾಡಿದರು.
 
 ಕಳೆದ ಲೋಕಸಭೆ ಚುನಾವಣೆಯಲ್ಲಿ ವಿಜಯ್ ಶಂಕರ್‌ಗೆ ಮೈಸೂರಿನಿಂದ ಲೋಕಸಭೆ ಟಿಕೆಟ್ ನೀಡುವ ಬದಲಿಗೆ ಹಾಸನ್‌ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿತ್ತು. ಇದರಿಂದ ವಿಜಯ್ ಶಂಕರ್ ಹಾಸನದಲ್ಲಿ ದೇವೇಗೌಡರ ಎದುರಿಗೆ ಸೋಲನುಭವಿಸಬೇಕಾಗಿ ಬಂದಿತ್ತು.
 
ಬಿಜೆಪಿ ವರಿಷ್ಠರು ಪದೇ ಪದೇ ನಿರ್ಲಕ್ಷ್ಯ ತೋರುತ್ತಿರುವುದರಿಂದ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ