ಸಿದ್ದರಾಮಯ್ಯ ಸರಕಾರ ಬುಡಸಮೇತ ಕಿತ್ತೆಸೆಯುವ ದಿನ ಹತ್ತಿರ : ಆರ್.ಅಶೋಕ್

ಶನಿವಾರ, 21 ಮೇ 2016 (19:06 IST)
ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರು ನಗರ ಮತ್ತು ನಗರ ಜಿಲ್ಲಾ ಬಿಜೆಪಿ ಘಟಕದ ಸಭೆ ಚಾಮರಾಜ್ ನಗರದ ಮರಾಠಾ ಹಾಸ್ಟೆಲ್ ಆವರಣದಲ್ಲಿ ಜರುಗಿದೆ. 
 
ಪಕ್ಷ ಸಂಘಟನೆಗಾಗಿ ಭಾರತೀಯ ಜನತಾ ಪಕ್ಷ ಸಭೆ ನಡೆಸುತ್ತಿದ್ದು, ಕೇಂದ್ರ ಸಚಿವ ಅನಂತ ಕುಮಾರ್, ಮಾಜಿ ಸಚಿವ ಆರ್‌ ಅಶೋಕ್ ಸೇರಿದಂತೆ ನಗರದ ಎಲ್ಲಾ ಬಿಜೆಪಿ ಮುಂಖಡರು ಸಭೆಯಲ್ಲಿ ಭಾಗಿಯಾಗಿದ್ದಾರೆ.
 
ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಆರ್.ಅಶೋಕ್, ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರವನ್ನು ಕಿತ್ತೆಸೆಯುವ ದಿನ ಹತ್ತಿರ ಬಂದಿದೆ. ರಾಜ್ಯ ಕಾಂಗ್ರೆಸ್ ಸರಕಾರವನ್ನು ಬುಡಸೇಮೆತ ಕಿತ್ತೆಸೆಯಲು ಕೇವಲ 20 ತಿಂಗಳು ಬಾಕಿ ಇದ್ದು, ಚುನಾವಣೆಗೆ ಬಿಜೆಪಿ ಪಕ್ಷ ಸಂಪೂರ್ಣ ಸಿದ್ದತೆ ಮಾಡಿಕೊಳ್ಳಬೇಕಾಗಿದೆ. ಭಾರತದ ಭೂಪಟ ಸಂಪೂರ್ಣ ಕೇಸರಿಯಾಗಬೇಕು. ದೇಶದ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸಬೇಕು. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ.


ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ