ಟಿಪ್ಪು ಜಯಂತಿ ಬೇಕಿದ್ದಿದ್ದು ನಿಮಗೇ: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ
ಈ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ ನಾಯಕ ಸುರೇಶ್ ಕುಮಾರ್ ‘ಸಿದ್ದರಾಮಯ್ಯನವರೇ, ಅಂದ ಹಾಗೆ ಟಿಪ್ಪು ಜಯಂತಿ ಮಾಡಬೇಕೆಂದು ಯಾರು ಮನವಿ ಮಾಡಿದ್ದರು? ನಿಮ್ಮನ್ನು ಬಿಟ್ಟರೆ ಇದು ಯಾರಿಗೂ ಬೇಕಿರಲಿಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನೊಂದೆಡೆ ಅರವಿಂದ ಲಿಂಬಾವಳಿ ಕೂಡಾ ಟ್ವೀಟ್ ಮಾಡಿ ‘ಸೆಕ್ಷನ್ 144 ಹೇರಿ, ಸಮಾಜದಲ್ಲಿ ಋಣಾತ್ಮಕ ಚಿಂತನೆ ಹರಡಿದ ನಾಯಕನ ಜಯಂತಿ ಆಚರಿಸಬೇಕಾದ ಅಗತ್ಯವೇನಿತ್ತು? ಇಷ್ಟೊಂದು ವಿರೋಧದ ನಡುವೆಯೂ ಸರ್ಕಾರ ಕನ್ನಡ ವಿರೋಧಿ ನಾಯಕನೊಬ್ಬನ ಜಯಂತಿ ಆಚರಿಸಿರುವುದು ನಿಜಕ್ಕೂ ನಾಚಿಕೆಗೇಡು’ ಎಂದು ಟೀಕಿಸಿದ್ದಾರೆ.