ಸಂವಿಧಾನ ಸರಿಯಾಗಿ ಓದಲ್ಲ, ಕಾನೂನು ತಿಳಿದುಕೊಳ್ಳಲ್ಲ: ಬಿಜೆಪಿಗೆ ಸಿಎಂ ಟಾಂಗ್

ಶನಿವಾರ, 22 ಜುಲೈ 2017 (13:16 IST)
ನಾಡಧ್ವಜ ಮಾಡಿದ್ರೆ ಅವಮಾನವಾಗುತ್ತಾ? ಐಕಾಂಟ್ ಅಂಡರ್‌ಸ್ಟ್ಯಾಂಡ್ ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. 
 
ಮತ್ತೆ ನಾಡಧ್ವಜದ ಬಗ್ಗೆ ಪ್ರಸ್ತಾಪಿಸಿದ ಸಿಎಂ ಎಲ್ಲದಕ್ಕೂ ಪಾಲಿಟಿಕಲ್ ಗಿಮಿಕ್ ಎನ್ನೋದು ಅರ್ಥವಾಗುತ್ತಿಲ್ಲ. ರಾಜ್ಯದ ಹಿತಾಸಕ್ತಿಗಾಗಿ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 
 
ಬಿಜೆಪಿ ನಾಯಕರು ಸರಿಯಾಗಿ ಸಂವಿಧಾನ ಓದಲ್ಲ, ಕಾನೂನು ತಿಳಿದುಕೊಳ್ಳಲ್ಲ ನಾಡ ಧ್ವಜ ಸಂಬಂಧ ಸರಕಾರಿ ಸಮಿತಿ ರಚಿಸಿದೆ. ಇನ್ಮೇಲೆ ನಾನು ಏನು ಹೇಳಲ್ಲ ಜನತೆಯ ತೀರ್ಮಾನಕ್ಕೆ ಬಿಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
 
ನಾಡಧ್ವಜದಿಂದ ರಾಷ್ಟ್ರೀಯ ಏಕತೆಗೆ, ಸಮಗ್ರತೆಗೆ ಧಕ್ಕೆ ಬರಲಿದೆ ಎಂದು ಬಿಜೆಪಿ ನಾಯಕಿಯಾದ ಶೋಭಾ ಕರಂದ್ಲಾಜೆ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ