ಶೋಭಾ, ಅಶೋಕ್ ಮಾತ್ರ ನಾಯಕರೇ? ಪಕ್ಷದಲ್ಲಿ ಬೇರೆಯವರಿಲ್ಲವೇ?: ಬಿಎಸ್‌ವೈಗೆ ಟಾಂಗ್

ಗುರುವಾರ, 12 ಅಕ್ಟೋಬರ್ 2017 (12:41 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಿಜೆಪಿ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯಲ್ಲಿ ಹಲವಾರು ನಾಯಕರಿದ್ದರೂ ಶೋಭಾ ಕರಂದ್ಲಾಜೆ ಮತ್ತು ಆರ್.ಅಶೋಕ್‌ಗೆ ಮಾತ್ರ ಯಾಕೆ ಮಣೆ ಹಾಕಲಾಗುತ್ತದೆ? ಎಂದು ಪ್ರಶ್ನಿಸಿ ಪಕ್ಷದಲ್ಲಿ ಇತರ ನಾಯಕರಿಲ್ಲವೇ ಎಂದು ವಾಗ್ದಾಳಿ ನಡೆಸಿದ್ದಾರೆ.
 
ನವಕರ್ನಾಟಕ ಪರಿವರ್ತನಾ ಯಾತ್ರೆಯ ಹೊಣೆಯನ್ನು ಅಶೋಕ್‌ಗೆ ವಹಿಸಲಾಗಿದೆ. ಬೆಂಗಳೂರು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ಕರಂದ್ಲಾಜೆಗೆ ಹೊಣೆ ವಹಿಸಲಾಗಿದೆ. ಬೇರೆ ನಾಯಕರು ಪಕ್ಷದಲ್ಲಿ ಇಲ್ಲವೇ ಎಂದು ಗುಡುಗಿದ್ದಾರೆ.
 
ಶೋಭಾ ಕರಂದ್ಲಾಜೆ ಮತ್ತು ಅಶೋಕ್‌ಗೆ ಹೆಚ್ಚಿನ ಮಣೆ ಹಾಕುತ್ತಿರುವುದು ಸರಿಯಲ್ಲ. ಇತರ ನಾಯಕರಿಗೂ ಪಕ್ಷದ ಹೊಣೆ ನೀಡಬೇಕು. ಇಲ್ಲವಾದಲ್ಲಿ ಹೈಕಮಾಂಡ್‌ಗೆ ದೂರು ನೀಡುತ್ತೇವೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
   
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ