ಅನುಮತಿ ನೀಡದ ಪೊಲೀಸರು: ವಿರೋಧದ ನಡುವೆಯೂ ರ್ಯಾಲಿ ಹೊರಟ ಕಾರ್ಯಕರ್ತರು

ಮಂಗಳವಾರ, 5 ಸೆಪ್ಟಂಬರ್ 2017 (14:18 IST)
ಹುಬ್ಬಳ್ಳಿ: ಬಿಜೆಪಿ ಯುವ ಮೋರ್ಚಾ ಕರೆ ನೀಡಿರುವ ಮಂಗಳೂರು ಚಲೋ ರ್ಯಾಲಿಗೆ ಪೊಲೀಸರು ಅನುಮತಿ ನೀಡಿಲ್ಲ. ಈ ವಿರೋಧದ ನಡುವೆಯೂ ನಗರದ ನೆಹರು ಮೈದಾನದಿಂದ ಪೊಲೀಸರ ಬಿಗಿ ಭದ್ರತೆಯ ನಡುವೆಯೇ ಬೈಕ್ ರ್ಯಾಲಿಗೆ ಚಾಲನೆ ಸಿಕ್ಕಿದೆ.

ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಷಿ ಬೈಕ್ ರ್ಯಾಲಿ ಹೊರಟ ಕಾರ್ಯಕರ್ತರಿಗೆ ಹಸಿರು ನಿಶಾನೆ ತೋರಿಸಿದರು. 200ಕ್ಕೂ ಹೆಚ್ಚು ಬೈಕ್ ಗಳಲ್ಲಿ ಬಿಜೆಪಿ ಕಾರ್ಯಕರ್ತರು ತೆರಳಿದರು.

ರ್ಯಾಲಿ ಹೊರಟ ಬಿಜೆಪಿ ಕಾರ್ಯಕರ್ತರಿಗೆ ಮಹಿಳೆಯರು ಆರತಿ ಬೆಳಗಿ, ಹಣೆಗೆ ಸಿಂಧೂರವಿಟ್ಟು ಕಾರ್ಯಕರ್ತರಿಗೆ ಶುಭಕೋರಿದರು. ರಾಣಿ ಚೆನ್ನಮ್ಮನಿಗೆ ಮಾಲಾರ್ಪಣೆ ಮಾಡಿ, ಕಾರ್ಯಕರ್ತರು ಅಂಜಟಗೇರಿ ಮಾರ್ಗವಾಗಿ ಮಂಗಳೂರು ಕಡೆ ರ್ಯಾಲಿ ಹೊರಟರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ