'ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ ಮೆಂಟಲ್'

ಭಾನುವಾರ, 2 ಫೆಬ್ರವರಿ 2020 (21:12 IST)
ಬಿಜೆಪಿ ಸಂಸದರ ವಿರುದ್ಧ ಕಾಂಗ್ರೆಸ್ ಸಂಸದ ಭಾರೀ ವ್ಯಂಗ್ಯವಾಡಿದ್ದಾರೆ.


ಸಂಸದ ಅನಂತ್ ಕುಮಾರ ಹೆಗಡೆ ಅವರನ್ನು ಕೂಡಲೇ ನಿಮ್ಹಾನ್ಸ್ ಗೆ ದಾಖಲು ಮಾಡಬೇಕು. ಅವರು ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾರೆ.

ಹೀಗಂತ ಸಂಸದ ಡಿ.ಕೆ.ಸುರೇಶ್ ವ್ಯಂಗ್ಯವಾಡಿದ್ದು, ಸ್ವಾತಂತ್ರ್ಯ ಹೋರಾಟಗಾರರನ್ನು ಷಂಡರು ಎಂದಿರೋ ಅನಂತ್ ಕುಮಾರ ಹೆಗಡೆಗೆ ತಿರುಗೇಟು ನೀಡಿದ್ದಾರೆ.

ಹಿಟ್ಲರ್ ಮಾದರಿ ಇಲ್ಲವೇ ಬ್ರಿಟಿಷ್ ರು ಇದ್ದಿದ್ದರೆ ಹೆಗಡೆಗೆ ಹೀಗೆ ಮಾತನಾಡೋಕೆ ಸ್ವಾತಂತ್ರ್ಯವೇ ಇರ್ತಿರಲಿಲ್ಲ ಅಂತ ಟಾಂಗ್ ನೀಡಿದ್ದಾರೆ. ಹೆಗಡೆಯನ್ನು ಬಿಜೆಪಿಯಿಂದ ಸಸ್ಪೆಂಡ್ ಮಾಡಬೇಕೆಂದು ಒತ್ತಾಯ ಮಾಡಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ