ಇಲ್ರಿ.. ಪರಿವರ್ತನಾ ಯಾತ್ರೆ ವಿಫಲವಾಗಿಲ್ಲ: ಜಾವ್ಡೇಕರ್

ಬುಧವಾರ, 8 ನವೆಂಬರ್ 2017 (12:46 IST)
ಬೆಂಗಳೂರಲ್ಲಿ ನಡೆದ ಪರಿವರ್ತನಾ ಯಾತ್ರೆ ವಿಫಲವಾಗಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಹೊತ್ತಿರುವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
ನಗರದ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆದ ಪರಿವರ್ತನಾ ಯಾತ್ರೆಗೆ ಜನ ಬಂದಿದ್ದರು.ಯಾತ್ರೆ ವಿಫಲವಾಗಿಲ್ಲ. ಇದೆಲ್ಲಾ ವಿಪಕ್ಷಗಳ ಉಹಾಪೋಹ ವರದಿ ಎಂದು ತಿಳಿಸಿದ್ದಾರೆ.
 
ನಾಳೆ ಪರಿವರ್ತನಾ ಯಾತ್ರೆಗೆ ಬ್ರೇಕ್ ಇರುವುದರಿಂದ ಮಂಗಳೂರಿನಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ನಡೆಯಲಿದೆ. ಸಭೆಯಲ್ಲಿ ಯಾತ್ರೆಯ ಅವ್ಯವಸ್ಥೆಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
 
ಬೆಂಗಳೂರಿನ ಪರಿವರ್ತನಾ ಯಾತ್ರೆಯ ಹೊಣೆ ಹೊತ್ತಿದ್ದ ಮಾಜಿ ಸಚಿವ ಆರ್.ಅಶೋಕ್ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ