ಬಿಜೆಪಿ ಗೆಲ್ತದೆ… ಕಾಂಗ್ರೆಸ್ ಸಾಯ್ತದೆ.. ಕಣ್ಣೀರಿಟ್ಟ ಕಾಂಗ್ರೆಸ್ ಹಿರಿಯ ನಾಯಕ

ಸೋಮವಾರ, 9 ಡಿಸೆಂಬರ್ 2019 (17:45 IST)
ರಾಜ್ಯದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಾಣಲು ಪಕ್ಷದ ಕೆಲವು ನಾಯಕರ ದುರಹಂಕಾರವೇ ಕಾರಣ.

ಹೀಗಂತ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಬಿ. ಜನಾರ್ಧನ ಪೂಜಾರಿ ಹೇಳಿದ್ದಾರೆ. ಪಕ್ಷದ ಇಂದಿನ ಪರಿಸ್ಥಿತಿ ಕಂಡು ಪೂಜಾರಿ ಕಣ್ಣೀರು ಹಾಕಿದ್ರು.  

ಉಪ ಚುನಾವಣೆ ಫಲಿತಾಂಶದ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಪಕ್ಷದ ಕೆಲ ನಾಯಕರ ದುರಹಂಕಾರ  ಕಾರಣವಾಗಿದೆ.

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ 3 ತಿಂಗಳ ಹಿಂದೆಯೇ ಹೇಳಿದ್ದೆ.  ಆದರೆ ನನ್ನ ಮಾತು ಯಾರೂ ಕೇಳಲಿಲ್ಲ. ಬಿಜೆಪಿ ಗೆಲ್ತದೆ, ಕಾಂಗ್ರೆಸ್  ಸಾಯುತ್ತದೆ  ಎಂದು ಕಣ್ಣೀರು ಸುರಿಸಿದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ