ಖಾಸಗಿ ಬಸ್ ಗೆ ಬೊಲೆರೋ ಡಿಕ್ಕಿ: ಸ್ಥಳದಲ್ಲೆ ಇಬ್ಬರ ಸಾವು

ಬುಧವಾರ, 6 ಡಿಸೆಂಬರ್ 2017 (16:23 IST)
ದಾವಣಗೆರೆ: ಖಾಸಗಿ ಬಸ್ ಗೆ ಬೊಲೆರೋ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಕೆರೆ ಬಳಿ ನಡೆದಿದೆ.


ದರ್ಶನ್(24), ಹರೀಶ(25) ಸ್ಥಳದಲ್ಲೆ ಸಾವನ್ನಪ್ಪಿದ ದುರ್ದೈವಿಗಳು. ಆರು ಜನರಿಗೆ ಗಂಭೀರ ಗಾಯಗಳಾಗಿವೆ. ಅಪಘಾತದ ತೀವ್ರತೆಗೆ ಪಿಕಪ್ ವಾಹನ ಚಾಲಕನ ಎರಡು ಕಾಲುಗಳು ಕಟ್ಟಾಗಿದೆ.ಪ್ರವೀಣ, ಪ್ರಹ್ಲಾದ್ ಹಾಗು ಮಹಾಂತ್ ರಾಜ್ ಅವರ ಸ್ಥಿತಿ ಗಂಭೀರವಾಗಿದೆ.


ಇವರು ಅಡಿಕೆ ಕೊಯ್ಯುವ ಕೂಲಿ ಕೆಲಸಕ್ಕೆ ಹೋಗುತ್ತಿರುವ ಕಾರ್ಮಿಕರಾಗಿದ್ದು, ಪಿಕಪ್ ಚಾಲಕ ಎದುರಿಗೆ ಬಂದ ಎತ್ತಿನ ಗಾಡಿಯನ್ನು ತಪ್ಪಿಸಲು ಹೋಗಿ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದ. ಗಂಭೀರ ಗಾಯಗೊಂಡವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ