ಗುಬ್ಬಿ ಯುವತಿಯರನ್ನು ಕೆಣಕಿದರೆ ಹುಷಾರ್, ಕಾನೂನು ಸಚಿವರ ತವರಲ್ಲಿ ಅನಾಚಾರ!

ಬುಧವಾರ, 18 ಜನವರಿ 2017 (17:15 IST)
ಯುವತಿಯೋರ್ವಳನ್ನು ಚುಡಾಯಿಸಿದ ಹಿನ್ನೆಲೆಯಲ್ಲಿ ದಲಿತ ಯುವಕನನ್ನು ಬೆತ್ತಲೆಗೊಳಿಸಿ ಚಪ್ಪಲಿಹಾರ ಹಾಕಿ ಹಿಂಸಿಸಿದ ಹೇಯ ಕೃತ್ಯ ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ನಡೆದಿದೆ. 
ಪೇಂಟಿಂಗೆ ಕೆಲಸ ಮಾಡುತ್ತಿದ್ದ ಯುವಕ ಅಭಿಷೇಕ್ ಗುಬ್ಬಿ ಪಟ್ಟಣದ ಸುಭಾಷ್ ನಗರದ ನಿವಾಸಿ. ಈತ ಅಪ್ರಾಪ್ತ ಯುವತಿಯನ್ನು ನಿರಂತರವಾಗಿ ಚುಡಾಯಿಸುತ್ತಿದ್ದ ಎನ್ನಲಾಗಿದೆ. 
 
ಇದರಿಂದ ರೊಚ್ಚಿಗೆದ್ದು ಯುವತಿಯ ಪೋಷಕರು, ಯುವತಿಯಿಂದಲೇ ಆತನಗಿ ಪೋನ್ ಮಾಡಿಸಿ ತೋಟದ ಮನೆಗೆ ಕರೆಸಿಕೊಂಡಿದ್ದಾರೆ. ತದನಂತರ ಈತನನ್ನು ಕಟ್ಟಿ ಹಾಕಿ, ವಿವಸ್ತ್ರಗೊಳಿಸಿ, ಚಪ್ಪಲಿ ಹಾರ ಹಾಕಿ, 'ಗುಬ್ಬಿ ಯುವತಿಯರನ್ನು ಕೆಣಕಿದರೆ ಇದೆ ಗತಿ' ಎಂದು ಬರೆದ ಸ್ಲೇಟ್ ನೀಡಿ ಅಮಾನವೀಯವಾಗಿ ವರ್ತಿಸಿದ್ದಾರೆ. ಈ ಹೇಯ ಕೃತ್ಯದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ