ಹೆಬ್ಬಾವಿನ ಜತೆಯಲ್ಲಿ ಸೆಣಸಾಡಿ ಗೆದ್ದ ಬಾಲಕ

ಗುರುವಾರ, 6 ಅಕ್ಟೋಬರ್ 2016 (10:57 IST)
ಪುಟ್ಟ ಬಾಲಕನೋರ್ವ ಹೆಬ್ಬಾವಿನೊಂದಿಗೆ ಸೆಣಸಾಡಿ ಗೆದ್ದ ಅಪರೂಪದ ಸಾಹಸಗಾಥೆ ಮಂಗಳೂರಿನಲ್ಲಿ ನಡೆದಿದೆ.

ಬಂಟ್ವಾಳ ತಾಲ್ಲೂಕಿನ ಸಜಿಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ದೈತ್ಯ ಹಾವಿನ ಜತೆ ಕಾದಾಡಿದ ಬಾಲಕನನ್ನು 
11 ವರ್ಷದ ವೈಶಾಖ್ ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಕಾಲುದಾರಿಯಲ್ಲಿ ಅಜ್ಜಿಮನೆ ಕಡೆ ನಡೆದು ಹೋಗುತ್ತಿದ್ದ ಬಾಲಕನ ಮೇಲೆ ಪೊದೆಯಲ್ಲಿದ್ದ ಹೆಬ್ಬಾವೊಂದು ದಾಳಿ ಮಾಡಿದೆ.ಬಾಲಕನ ಕೈ ಹಿಡಿದು ನುಂಗಲು ಪ್ರಾರಂಭಿಸಿದೆ. ಪ್ರಾಣಾಪಾಯಕ್ಕೆ ಸಿಲುಕಿದ ಬಾಲಕ ಸಹಾಯಕ್ಕಾಗಿ ಕೂಗಿಕೊಂಡಿದ್ದಾನೆ. ಆದರೆ ಅದು ನಿರ್ಜನ ಪ್ರದೇಶವಾಗಿದ್ದರಿಂದ ಯಾರೂ ಆತನ ಸಹಾಯಕ್ಕೆ ಬಂದಿಲ್ಲ. ಸಮಯಪ್ರಜ್ಞೆ ಮೆರೆದ ಬಾಲಕ ತಕ್ಷಣ ಒಂದು ಚೂಪಾದ ಕಲ್ಲನ್ನೆತ್ತಿಕೊಂಡ ಬಾಲಕ ಹಾವಿನ ಕಣ್ಣಿಗೆ ಅನೇಕ ಬಾರಿ ಜಜ್ಜಿದ್ದಾನೆ. 
 
ಕಣ್ಣಿಗೆ ಬಲವಾದ ನೋವಾಗಿದ್ದರಿಂದ ಹಾವು ಬಾಲಕನನ್ನು ಬಿಟ್ಟು ಪೊದೆಯೊಳಕ್ಕೆ ಹೋಗಿದೆ. 
 
ಹೆಬ್ಬಾವಿಗೆ ವಿಷವಿಲ್ಲದಿದ್ದುದರಿಂದ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.  ಕೈಯ್ಯಿಗೆ ಗಾಯಗೊಂಡಿರುವ ಬಾಲಕನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ