ಬೈ ಎಲೆಕ್ಷನ್: ಬಿಸಿಲೂರಿಗೆ ಲಗ್ಗೆ ಇಟ್ಟ ಕೈ ಪಡೆ

ಸೋಮವಾರ, 6 ಮೇ 2019 (13:17 IST)
ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೈ ಪಡೆ ಬಿಸಿಲೂರಿಗೆ ಲಗ್ಗೆ ಇಟ್ಟಿದೆ.

ಮೇ 19 ರಂದು ಚಿಂಚೋಳಿ ವಿಧಾನಸಭೆ ಉಪ ಚುನಾವಣೆ ನಡೆಯಲಿದೆ. ಈ ಹಿನ್ನಲೆ ಅಧಿಕೃತವಾಗಿ ಅಖಾಡಕ್ಕೆ ಧುಮುಕಿದ್ದಾರೆ ಕೈ -ಕಮಲ‌ ನಾಯಕರು.

ಕಲಬುರಗಿ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡುರಾವ್ ನೇತೃತ್ವದಲ್ಲಿ ಪದಾಧಿಕಾರಿಗಳ ಸಭೆ
ನಡೆಯಲಿದೆ. ಆ ಸಭೆ ಬಳಿಕ ಚಿಂಚೋಳಿಯಲ್ಲಿ  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡುರಾವ್, ಡಿಸಿಎಂ ಪರಮೇಶ್ವರ್, ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಬಹಿರಂಗ ಸಮಾವೇಶ ನಡೆಯಲಿದೆ.

ಇತ್ತ ಬಿಜೆಪಿ ನಾಯಕರಿಂದ ಕೂಡ ಅಬ್ಬರದ ಪ್ರಚಾರ ನಡೆಯುತ್ತಿದೆ. ಚಿಂಚೋಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪರಿಂದ ಮಠಾಧೀಶರ ಭೇಟಿ ನಡೆದಿದೆ. ಚಂದಾಪುರದಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ.

 ಕಲಬುರಗಿಯಲ್ಲಿ  ಬಿಜೆಪಿ ಶಾಸಕರ ಜೊತೆ ಬಿಎಸ್‌ವೈ ಮಹತ್ವದ ಸಭೆ ನಡೆಸಿದ್ರು. ಚಿಂಚೋಳಿ ಪೊಲೀಸ್ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ