ಹನುಮಾನ್‌ ಚಾಲೀಸಾ ಪಠಣಕ್ಕೆ ಕರೆ

ಗುರುವಾರ, 4 ಮೇ 2023 (19:00 IST)
ಅಧಿಕಾರಕ್ಕೆ ಬಂದ್ರೆ ಬಜರಂಗದಳ ನಿಷೇಧ ಎಂದು ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಹೇಳಿದ್ದು, ಇದಕ್ಕೆ ಬಜರಂಗದಳ ಕೆರಳಿದೆ.. ಕಾಂಗ್ರೆಸ್‌ ಪ್ರಣಾಳಿಕೆಗೆ ಬಿಜೆಪಿ, ಸಂಘ ಪರಿವಾರ ಆಕ್ರೋಶ ಹೊರ ಹಾಕಿದ್ದು, ಇಂದು ಸಂಜೆ 7 ಗಂಟೆಗೆ ಹನುಮಾನ್‌ ಚಾಲೀಸಾ ಪಠಣಕ್ಕೆ ಬಜರಂಗದಳ ಕರೆ ನೀಡಿದೆ.. ವಿಶಿಷ್ಟ ಅಭಿಯಾನಕ್ಕೆ ಬಜರಂಗದಳ ಚಾಲನೆ ನೀಡಲಿದ್ದು, ಬಜರಂಗದಳ ಸಂಘಟನೆಗೆ ಕೇಸರಿ ಪಡೆ ಸಾಥ್​ ನೀಡಲಿದೆ.. ಎಲ್ಲಾ ಹನುಮ ಮಂದಿರ ಹಾಗೂ ಬೇರೆ-ಬೇರೆ ಹಿಂದೂ ದೇವಾಲಯಗಳಲ್ಲಿ ಹನುಮಾನ್​ ಚಾಲೀಸಾ ಪಠಣೆಗೆ ಕರೆ ನೀಡಲಾಗಿದೆ. ಹಿಂದೂ ಮತಗಳ ಕ್ರೋಢೀಕರಣಕ್ಕೆ ಅವಕಾಶ ಸಿಕ್ಕ ಖುಷಿಯಲ್ಲಿ ಬಿಜೆಪಿ ಇದ್ದು, ಆಡಳಿತ ವಿರೋಧಿ ಅಲೆಯಿದ್ದ ಕಡೆಯಲ್ಲಿ ಹಿಂದುತ್ವ ಕಾರ್ಡ್‌ ಪ್ಲೇ ಮಾಡಲು ತಯಾರಿ ನಡೆಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ