ಪ್ರಕಾಶ್ ರೈ ವಿರುದ್ಧ ದೂರು! ಕಾರಣವೇನು ಗೊತ್ತಾ?

ಬುಧವಾರ, 21 ಫೆಬ್ರವರಿ 2018 (08:56 IST)
ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ  ವಿರುದ್ಧ ಟ್ವೀಟ್ ಮಾಡಿದ್ದ ಬಹುಭಾಷಾ ತಾರೆ ಪ್ರಕಾಶ್ ರೈ ವಿರುದ್ಧ ದೂರು ದಾಖಲಾಗಿದೆ.
 

ಸಂವಿಧಾನದ ಕುರಿತು ಸಚಿವ ಅನಂತಕುಮಾರ್ ಹೆಗ್ಡೆ ನೀಡಿದ್ದ ಹೇಳಿಕೆ ವಿರೋಧಿಸಿ ಪ್ರತಿಭಟನೆ ಮಾಡುವಾಗ ಹೆಗಡೆ ‘ದಲಿತರು ನಾಯಿ’ ಎಂದಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಇದರ ವಿರುದ್ಧ ಸಚಿವರ ಮಾಜಿ ಆಪ್ತ ಕಾರ್ಯದರ್ಶಿ ಸುಭಾಸ ಮಂಡೂರು ಶಿರಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಚಿವ ಹೆಗಡೆ ಎಲ್ಲಿಯೂ ದಲಿತರನ್ನು ಎಲ್ಲಿಯೂ ಅವಹೇಳನ ಮಾಡಿರಲಿಲ್ಲ. ಹಾಗಿದ್ದರೂ ರೈ, ಸಚಿವರ ಹೇಳಿಕೆ ತಿರುಚಿ ಅಪಪ್ರಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ